Sunday, December 5, 2010

Kannada: A Living Classical Language

Kannada: A Living Classical Language

Linguistic identity in India is passing through period of crisis This crisis is an offshoot of globalization. Speech communities are seeking more space in the language politics of the country. Languages which are not included in the eighth schedule of the constitution of India are putting forward their case for inclusion in the list. Stateless languages are being considered for place of second official language of some states. Urdu and Sindhi are such languages. Tribal languages which are in list of endangered languages are fighting for a place in the school education. Now a new dimension is added to the scenario when an ancient language of India, Tamil claimed its place in the list of classical languages. It is stated that the plea to recognize Tamil as a classical language was made as early as 1887 by the scholar, Paruthi Mal Kalaignar, and the appeal had been repeatedly made ever since.

Colonial administration in India which replaced Mughal administration considered Persian and Arabic as classical languages. ‘The Mughal power was something the British had to contend with. Since there had been established widespread conventions to look upon Persian, Arabic, and Sanskrit as languages of great value in terms of religious loyalty, it was easy for them to treat these languages as classical. Moreover, an essential belief relating to the status of a classical language in Europe has been to look at them as the historical stages that may now be not in use. Classical Greek and Latin were "dead" languages, enriching the living ones with their vocabulary, texts, and literature, etc. Sanskrit really fitted this bill, whereas Persian and Arabic carried their day because of the Mughal patronage and Muslim loyalty. Politics and religion were important ingredients that strengthened their original European notion of what constituted a classical language.’(M.S.Thirumalai, ‘Declaring a Language Classical’, Language in India 2004)

Classical Language: How it is defined

Linguists all over the world agree that a language is termed Classical when the literature written in that language is valuable but the language is studied only through the written documents because it ceases to have native speakers. Ancient Greek, Latin, Sanskrit are such Classical languages. There is abundant literature written in these Languages. It is valuable for mankind. But no one speaks these languages as his or her first language. These languages are second languages for many scholars through out the world. They learn these languages through the written forms of these languages. Many of the features attributed to a natural Language became inoperative in the case of Classical Languages because they don’t have a spoken variety. Changes, both diachronic and synchronic which are common to a natural language are not found in Classical language. ( Encyclopedia of Language and Linguistics (ed) Asher M.B, Vol. iii Pp) If we stick on to this definition of a Classical Language no Indian Language except Sanskrit fulfills the criteria for terming that language as a Classical Language.

But a debate is going on now. Sanskrit is being studied as a Classical language in many North American and European Universities. In India Sanskrit is considered a Classical Language but not declared as a Classical Language by the State. On the contrary the Central Sahitya academy has included Sanskrit in the list of languages for which the academy gives its annual awards for best book. It means that the academy considers Sanskrit as a creative language, i.e. as a language of expression, though through written form.

Classical Language: Need for a new definition

There is a need to redefine a Classical language. The government of India has established certain criteria with the help of Sahitya Academy for declaring a language as classical language. The criteria, according to a Cabinet report, include that

1. A language should be of great antiquity and should have its early texts dating back at least 1,000 years.

2. This language should also have a body of ancient literature and texts considered a valuable heritage;

3. Its literary tradition should be original and not borrowed from another speech or community, and its literature must be distinct from modern. However, there may also be a discontinuity between the classical language and its later forms or of its offshoots like Latin versus Roman, Sanskrit-Pali versus Prakrits, and Modern Indo-Aryan."

A new definition is made to accommodate Tamil in the list of Classical languages. In fact this debate began with a note from Prof. George L. Hart, Chair, Dept. of South and South Asian Studies, University of California, Berkeley. (Incidentally he is also a Professor of Tamil in that University) He published a note on the web in April, 2000 making a case for Tamil. In his note he says “to qualify as a classical tradition, a language must fit several criteria: it should be ancient, it should be an independent tradition that arose mostly on its own not as an offshoot of any other tradition, and it must have a large and extremely rich body of ancient literature.” Professor Hart consolidates his argument with the following observation. ‘‘Tamil meets each of these requirements. It is extremely old (as old as Latin as and older than Arabic); it arose as an entirely independent tradition, with almost no influence from Sanskrit or other languages; and its ancient literature is indescribably vast and rich.”(annex.)

The criteria adopted by the Central Government on the basis of a report from the central Sahitya Academy for declaring Tamil as a Classical Language are same as those stipulated by Professor Hart. If we accept this stipulation as guidelines then a necessary corollary is to include any other Language which fulfills these conditions in the list of Classical languages.

A Case for Kannada

Kannada is one such language. It fulfills all these conditions.1) Kannada is an ancient Language. As a member of the Dravidian Language family its life span has crossed two thousand years. Kannada branched out from the proto-Dravidian family probably in 6-5 c. B.C. Scholars have proved that Kannada was the first major Language after Tulu to become an independent Language. Its oldest dateable recorded word ‘isila’ is found in the Brahmagiri inscription of Ashoka which is located in Karnataka.”it can be shown that the place name Isila occurring in the first line of the Brahmagiri edict of Asoka,where in his mahatmas resided,is a prakritization of the Kannada word esil whose Tamil cognate is eyil meaning fort of fortified town;the name Eyilnadu occurs in two Tamil inscriptions of Kolar district of Mysore state’ (Narasimhachar.D.L. Religion and society of Karnataka under the Satavahanas KTA.,Bangalore 1968,p110) This inscription is from 3rd century B.C. ‘isila’ is a place name. This city was in a place in present day mid Karnataka. This evidence suggests that Kannada was a spoken Language in that area by that time .Travel records of many European and Chinese visitors depict many place names of Karnataka .Ptolemy, the Greek traveler visited Karnataka in the early part of the first millennium. His travelogue has many place names of Karnataka. Some of these cities exist even today.They are spread over in the area between River Bhima and Banavasi.Nagarouris is Nagarur,Tabaso is Tavasi in Belgaum Dist. Inde is Indi in Bijapur Dist. Tiri Pangalida is gadahingaja near Kollapur,Hippo koura is Huvina hipparige in Belguam dist.(Govinda Pai.M. Ptolemy’s Hippokoura. Divige ,Pp98-103)

Gata sapthashati a work attributed to Hala, a Shatavahana king was composed in 1st cen.B.C. There are many Kannada words in this work. Attaa(ate+mother-in-law),tuppa(ghee),potte(belly)phalahi(hatti=cotton) are some such Kannada words.

Huang tsang and Fahiyan from China came to Karnataka and stayed in many centers of learning. Huang tsang visited South India in 640 A.D. He describes the valor of Pulikeshi’s army .Pulikeshi established trade links with Iran. Khusro the second of Iran sent his ambassador to Pulikeshi’s court. A famous painting in the caves of Ajanta depicts the scene where Pulikeshi is greeting the ambassador from Iran.

It is believed that Chan school of Buddhism which flourished in China took its roots from Vajrayana Buddhist school of Karnataka. This Buddhist school had its center in Balligave (Dist.Shimoga). Buddhism had its roots in Karnataka. Archeological surveys have unearthed a Buddishst stupa and complex at Sannati in Gulbarga Dist of Karnataka.

Scholars have shown that some Greek plays of the early Christian era have Kannada words and sentences. The action of a Greek play of 2nd century A.D. takes place in coastal Karnataka. Few dialogues in this play are not in Greek. It is argued that these non-Greek words are from Kannada.

In the first millennium the northern border of Kannada speaking land was extended up to the river Narmada .The famous battle between Pulikeshi,(600 A.D) the second and Sri Harasha of Kanouj was fought on the banks of Narmada .There is a revenue taluk in Vidrabha region of Maharashtra with a name ‘Kannada’ .Rulers of many dynasties from Karnataka ruled many parts of northern and central parts of modern India. There are evidences to prove that the earlier rulers of Nepal were fro Karnataka. The priests of Lord Pashupathinath temple at Katmandu hail from Karnataka even to this day. Dr.Chidanada Murthy has done extensive research to bring forth the cultural and political relations that existed between Karnataka and Nepal. Kannada speaking people who went with these rulers from Karnataka to Mithila (northern part of present day Bihar) have settled in those parts of India and could be identified even to this day. Eastern Gangs of Karnataka origin ruled in Orissa. These rulers built the famous Lingaraja temple complex of Bhuvaneshwara. Chalukys,a royal dynasty of Karnataka origin (11-12 c. A.D) ruled in Gujarat and Senas (11-12 c.A.D) in Bengal. It is undisputed fact that the rulers from these dynasties were from Karnataka. These facts prove that the Kannada triune –land, people and language is as old as Tamil.

2) Kannada literature has an independent tradition. Critics have established that the uniqueness of Kannada literary tradition is that it has continuously strived to be different from Sanskrit literary tradition. Deviations from Sanskrit literary tradition are more important than concurrences. The very first Kannada work on poetics and grammar, Kavirajamarga (Poet’s royal path) clearly establishes the separate identity of Kannada language and literary tradition. This work(9th century) written by Srivijaya in the court of the Rashtrakuta king Nrupatunga identifies the hegemony of Sanskrit and tries to establish the cultural identity of Kannada language, land and the speakers of Kannada language. Srivijaya lists many literary works written in Kannada and mentions the name of writers who wrote in Kannada before his time. Most of these works are lost. But later writers and compilers have quoted extensively from these works. Sri vijaya names some of these writers. Vimalodaya, Candra and Lokapala are some such names. This work being a treatise on poetics cites Kannada Examples from contemporary works. It is interesting to note that Prof. Sheldon Pollok of University of Chicago had made an in depth study of Kavirajamarga. For him this work represents the unique effort to create a native standard language to oppose and replace the hegemony of both Sanskrit and Prakrits.

Literary tradition in Kannada took its root not through independent works from poets, but it in inscriptional compositions. We come across scores of inscriptions with compositions of high literary merit. The inscription of Shravanabelagola which praises a Jain saint who renounced this world and the inscription of Badami which extols the heroics of a leader are a case in point. These two inscriptions of 7th and 8th c. A.D herald the inbuilt traits of Kannada literature of the next three centuries.

The first major poet of Kannada, Pampa (902 A.D) wrote his works in the court of Arikesari the second of the Chalukya dynasty. The city from where Pampa wrote his two epics is now in modern day Andhra Pradesh.His birth place Annigeri is in Karnataka.his mother Abbanabbe hailed from this place.Annigeri still exists by the name in Gadag Dist. Of Karnataka. Pampa wrote Vikramarjuna vijaya (based on Mahabharata) and Adipurana (story of the first Jaina Theerhankara Vrshaba deva) Pampa’s greatness as poet is not attributed to the fact that he took stories from Sanskrit sources but to his conscious effort to create his own identity in poetic tradition. In fact the poetic way of fusing the history with the contemporary is the contribution of Pampa. Though his epic is based on Mahabharata he equates the deeds of the hero Arjuna with the heroics of his contemporary king Arikesari, the second, and a Chalukyan king. Pampa makes History a signifier through which contemporary events are signified. This mode of expression is unique for literature of any Indian Language. Pampa crated a poetic idiom for Kannada. His influence on the poets is acknowledged each one of them.

Bhakti movement in south India took deep roots in Karnataka in the form of Veera shaiva tradition. It was a socio-religious movement. Its oral expressions are called Vacanas (sayings). Vacana literature has no parallels in any Indian language. Its uniqueness is that it foregrounds the little tradition against the great tradition which had its expression through Sanskrit. Vacanas embody a unique way of communicating with the God. The language used in Vacanas is fresh and devoid of all clichés. This form of literature clearly gives an edge to Kannada literature on any other Indian language.

Vacana writing was a part of social activism. These writers were fighting for a cause. Social equality was their aim. It is interesting to note that of the 350 plus Vacana writers documented from that period many belong to the lower strata of the society. They upheld the dignity of labour. The main tenets of this Bhakti movement centers round the concept of social mobility. This culminated in an inter caste marriage between an untouchable boy and a Brahmin girl. This event created an unprecedented chain of events witnessed in the History of Karnataka. The monotheistic agenda which they proposed was an instrument to overcome the evils of caste system. These poets were not mere Social activists; they were scholars in their own right. They quote extensively from various sources on Philosophical discourse. The Vacana literature was the experiment in fusing art with social commitment . Allamaprabhu had his training in Natha cult.But he became the intellectual leader of this movement .He is the de facto chairman of the virtual assembley of these saints called Anubhava Mantapa. Basavanna was an administrator .He played a leading role in this socio-religious Movemnt.

Vacana movement is unique in many ways. It brought forth the concept of gender equity. It called upon to do away with the discrimination on the basis of gender. Many (more than thirty five) women writers wrote Vacanas espousing the social equality. Akka Mahadevi who like Meera or Godha considered God (Chenna mallikarjuna)as his life partner and came out of the wedlock with the king Kaushika. This rebellious deed echoes in her Vacanas. Kalavve one of these women writers was a dalit women.

It is interesting to note that translations from Vacana Literature are included in various anthologies representing World Literature. A.K.Ramanujan has translated a selection of Vacanas into English and published under the name ‘The speaking of Shiva’. Kamil Zvalebil a Dravidian Linguist of high repute has recently rendered a few Vacanas into English. Scholars from various European Languages have found an interesting international site in Vacana literature and working on various translations. There are scores of European websites which are dedicated to give information on Vacana movement and Literature.

A parallel Bhakti movement took shape in Vijanagara period. Vaishnava (Haridasa=Servents of Vishnu,the god) saints wrote keertanas. This keertana tradition gave birth to a singing mode which is now called Karnataka Sangeeta. Purandara dasa of this Haridsa tradition is considered the forefather of Karnataka sangeeta. Kanakadasa was poet of high repute. He allegorizes the rift between the haves and have-nots in a story which depicts a tussle for supremacy between Ragi( a staple food of the poor) and Rice. Haridasa tradition is live and vibrant even to this day. People from all walks of life, including women, irrespective of their caste barriers follow the tenets of this creed. There are even Muslim saints in this tradition.

Bhakti movement influenced the main stream poets to a great extant. Their poetic idiom

Another main feature of Kannada writing tradition is the abundance of works which canonize various knowledge sources. Apart from works on grammar, poetics, metrics there are scores of independent works dealing with many aspects of human life. Works on Medicine, Mathematics, Horse breeding, Culinary art are some such sources. There are encyclopedias giving information on many subjects.Viveka Cintmani (15th C) is one such work.

There is one more aspect of Kannada Literary tradition which is both interesting and important for the scholars of Indian Literature. Stories of Pancatantra are passed on in two distinct traditions. Of these two traditions one attributed to Vasubhaga bhatta is completely lost in Sanskrit . Literatures of various Indian Languages do not retain this tradition of stories except Kannada. Durgasimha of 13th c. A.D. in his Kannada Pancantra follows the Vasubhagabhatta’s tradition. This literary work in Kannada is the only Indian source for this lost tradition of Vasubaga bhatta.

3) Kannada literature is vast. It comprises of both oral and written components. Its epigraphical material is abundant and is full of cultural elements. Karnataka has a record number of inscriptions. Over 25,000 of these inscriptions written in Kannada language and script are found in various parts of Karnataka,Maharashtra,Tamilnadu and Andra pradesh. There are hundreds of inscriptions of Kannada language written in various other scripts .The inscriptions written either on stone or copper plates have been recorded and studied. Though Tamilnadu has equal number of inscriptions, the content and the style of language used in those inscriptions lacks the variety. Karnataka has Hero stones (Memorials for the unknown heroes who fought and laid their lives for a social cause), Mahasathi stones (Memorials for the women who immolated themselves with the bodies of their husbands brought from the battle field) and inscriptions depicting the various grants given to temples and individuals. Karnataka historians rely on this inscription to reconstruct the social, political and cultural History of this land. Many of these inscriptions contain beautiful literary composition. There are many instances where the main stream poets, like Ranna and Janna (10th century A.D), have written the texts of inscriptions. The tradition of installing the inscriptions for various purposes is unbroken in Karnataka, till the advent of modern modes of communications. No other Indian Language has so much of written material on stones and copper plates.

The First dateable inscription in Kannada script is from 450.A.D. This is found in a small village, Halmidi in Hassan district of Karnataka. It extols the deeds of a hero and mentions land grant made to him. The name of this place (palmidi) is retained in tact even to this day except for the sound change of word initial ‘p’ to ‘h’

Kannada script is derived from Brahmi. Apart from Siddha matrika script of Gupta period no other Indian script except Kannada script has such long history of writing. The corpus of writing in Kannada script produced during in these centuries runs for several volumes of printed material. The artistic nature of this script is appreciated many scholars. ‘The Courier’ ,the official document of UNESCO,writing on Asian Scripts(1964,p16) records Kannada script as one of major scripts of world, on the authority of David Derringer, a great scholar.The document even reproduces an inscription from the Hoysala period(13th c.A.D)

Kannada literature is rich in the sense that it is not mere creative literature but contains canonized local knowledge systems. There are books on grammatical tradition, Dictionaries, Encyclopedias and books on veterinary science, agriculture, medicine all these facts indicate that Kannada is a fit candidate to be declared as a Classical Language.

There is a need to look at this issue from a different perspective. Languages like Tamil, Kannada have lived a long life. If we take the time frame of the writing systems of the world a few have survived to see the third millennium. Apart from Hebrew only Chinese writing system has history of three millennia. If we consider the case of modern Indian languages only Tamil and Kannada have a long history of writing. Both have written records dating from the first millennium. No other modern Indian language has such an unbroken history of writing. If we extend this probe in to global level Kannada claims its place among the first ten languages with a history of continuous writing system of all the living languages of the world.

Languages like Tamil and Kannada have stood the test of time. They were languages of the people in the first millennium. They continued to be the media of expression in the new world. Now they are in the third millennium holding their fort against all the onslaughts of the technology. These criteria should be included in the definition of a Living Classical Language.

Kannada University

Vidyaranya

583 276


Tuesday, August 26, 2008

ಭಾಷೆ ಯಾರ ಸ್ವತ್ತು?

ಭಾಷೆ ಯಾರ ಸ್ವತ್ತು?
ಈಚೆಗೆ ಹಿರಿಯರೊಬ್ಬರು ಕೇಳಿದ ಪ್ರಶ್ನೆಯಿದು: ’ಭಾಷೆ ಯಾರ ಸ್ವತ್ತು?’ ಇದೊಂದು ಕಾಡಿಸುವ ಪ್ರಶ್ನೆಯೆಂದು ಮೇಲು ನೋಟಕ್ಕೆ ಅನ್ನಿಸುವುದಿಲ್ಲ. ಕನ್ನಡ ಯಾರಿಗೆ ಸೇರಿದ್ದು ಎಂದು ಕೇಳಿದರೆ ಅದು ಆ ಭಾಷೆಯನ್ನು ಬಳಸುವ ಎಲ್ಲರಿಗೂ ಸೇರಿದ್ದು ಎಂದು ಉತ್ತರ ಕೊಡುತ್ತೇವೆ. ಆದರೆ ಈ ಭಾಷೆಯನ್ನು ಈ ಹಿಂದೆಯೂ ಆಡಿದವರಿದ್ದಾರೆ ಮುಂದೆ ಆಡುವವರೂ ಇದ್ದಾರೆ. ಆಂದರೆ ಕನ್ನಡ ಅವರೆಲ್ಲರಿಗೂ ಸೇರಿದ್ದು ಎಂದು ಹೇಳಬೇಕಾಗುತ್ತದೆ. ಯಾವುದೇ ಸ್ವತ್ತನ್ನು ನನಗೆ ಸೇರಿದ್ದು; ಕೆಲವರಿಗೆ ಸೇರಿದ್ದು ಇಲ್ಲವೇ ಎಲ್ಲರಿಗೂ ಸೇರಿದ್ದು ಎಂದು ಬಗೆಬಗೆಯಾಗಿ ನೋಡುತ್ತೇವೆ. ಸ್ವತ್ತು ಯಾರಿಗೆ ಸೇರಿದ್ದು ಎನ್ನುವುದನ್ನು ಅವಲಂಬಿಸಿ ಅದನ್ನು ಯಾರು ಹೇಗೆ ಬಳಸಬೇಕು ಮತ್ತು ಅದರ ಫಲವನ್ನು ಉಣ್ಣಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಅದನ್ನು ಬಹುಮಟ್ಟಿಗೆ ಒಪ್ಪಿ ಆಚರಿಸುತ್ತವೆ. ಈ ಒಪ್ಪಂದವನ್ನು ಮೀರಿದ ಪ್ರಸಂಗಗಳು ತಿಕ್ಕಾಟಗಳಿಗೆ,ಕಾನೂನು ಸಮರಗಳಿಗೆ ಕಾರಣವಾಗುತ್ತವೆ. ಹಾಗಿದ್ದಲ್ಲಿ ಭಾಷೆ ಎನ್ನುವ ಎಲ್ಲರಿಗೆ ಸೇರಿದ ಸ್ವತ್ತಿನ ನಿರ್ವಹಣೆ ಹೇಗೆ ಆಗುತ್ತಿದೆ?

ಎಲ್ಲರಿಗೆ ಸೇರಿದ ಸ್ವತ್ತನ್ನು ಎಲ್ಲರೂ ಬಳಸದೇ ಇರಬಹುದು.ಬಳಸುವವರೂ ಕೂಡ ಬಳಸುವ ಪ್ರಮಾಣದಲ್ಲಿ ಏರುಪೇರುಗಳಿರುತ್ತವೆ. ಊರೊಟ್ಟಿನ ಮೈದಾನವೊಂದನ್ನು ಕೆಲವರು ಆಟ ಆಡಲು ಬಳಸಿಯಾರು. ಮತ್ತೆ ಕೆಲವರು ಹಾದು ಹೋಗುವ ದಾರಿ ಅದರ ನಡುವೆ ಇದ್ದೀತು. ಕೆಲವರು ತಿರುಗಾಡಿ ಬಂದಾರು. ಮತ್ತೆಕೆಲವರು ಎಂದೂ ಅದರೆಡೆಗೆ ತಲೆಹಾಕದೆಯೂ ಇದ್ದುಬಿಡುತ್ತಾರೆ. ಆದರೆ ಇದರಿಂದ ಆ ಮೈದಾನ ಊರೊಟ್ಟಿನದು ಎಂಬುದಕ್ಕೆ ಧಕ್ಕೆಯೇನೂ ಇಲ್ಲ. ಅದನ್ನು ಕೆಲವರು ತಮ್ಮದನ್ನಾಗಿ ಮಾಡಿಕೊಂಡು ಬೇರೆಯವರ ಬಳಕೆಗೆ ಸಿಗದಂತೆ ಮಾಡಿದಾಗ ತಕರಾರುಗಳು ಹುಟ್ಟಿಕೊಳ್ಳುತ್ತವೆ.ಇಲ್ಲವೇ ಆ ಮೈದಾನವನ್ನು ಯಾವಾಗ ಯಾರು ಮತ್ತು ಏಕೆ ಬಳಸಬೇಕು ಎಂಬುದನ್ನು ಕುರಿತು ಒಮ್ಮುಖದ ನಿರ್ಧಾರಗಳನ್ನು ತೆಗೆದುಕೊಂಡಾಗಲೂ ಗೊಂದಲಗಳು ಉಂಟಾಗುತ್ತವೆ.

ಭಾಷೆ ಎಲ್ಲರಿಗೆ ಸೇರಿದ ಸ್ವತ್ತು ಎಂದರೂ ಅದು ಇತರ ಸ್ವತ್ತುಗಳ ಹಾಗೆ ಇರುವಂತೆ ತೋರುತ್ತಿಲ್ಲ. ಏಕೆಂದರೆ ಅದಕ್ಕೆ ಎಲ್ಲರೂ ನೋಡಬಹುದಾದ ಗ್ರಹಿಸಬಹುದಾದ ಹೊರ ನೆಲೆಯೊಂದು ಇಲ್ಲ. ನಾವು ಆಡುವ ಇಲ್ಲವೇ ಕೇಳುವ ಮಾತುಗಳೆಲ್ಲ ಆ ಸ್ವತ್ತಿನ ಫಲಿತಗಳೇ ಹೊರತು ಆ ಮಾತುಗಳೇ ಸ್ವತ್ತುಗಳಲ್ಲ. ಹಾಗಾಗಿ ಎಲ್ಲರಿಗೂ ಸೇರಿದ ಭಾಷೆಯೆಂಬ ಸ್ವತ್ತಿನ ದುರುಪಯೋಗ,ಅತಿಕ್ರಮಣಗಳು ನಡೆಯುತ್ತಿವೆಯೇ ಎನ್ನುವುದನ್ನು ಸುಲಭವಾಗಿ ಗುರುತಿಸಲು ಆಗುವುದಿಲ್ಲ. ನಮಗೆ ಗೊತ್ತಿಲ್ಲದಂತೆ ಎಲ್ಲರಿಗೂ ಸೇರಿದ ಸ್ವತ್ತಿನ ಮೇಲಿನ ಹಿಡಿತ ಕೆಲವರ ಕೈಸೇರಿರಲೂ ಬಹುದು. ಅದು ಹಾಗಾಗಿದೆ ಎನ್ನವುದು ನಮಗೆ ಗೊತ್ತಾಗದೆಯೂ ಇರಬಹುದು.

ಎಲ್ಲರಿಗೂ ಸೇರಿದ ಸ್ವತ್ತುಗಳಾದ ನೆಲ ಮತ್ತು ನೀರು ಈಗ ಎಲ್ಲರಿಗೂ ಸೇರಿದ ಸ್ವತ್ತುಗಳಾಗಿ ಉಳಿದಿಲ್ಲ. ನೆಲ ಮತ್ತು ನೆಲಕ್ಕೆ ಸೇರಿದ ಪ್ರತಿಯೊಂದು ಈಗ ಕೆಲವರ ಕೈಸೇರಿದೆ. ಇಲ್ಲವೆ ಕೆಲವರು ಅದರ ಬಳಕೆ ಹೇಗಾಗ ಬೇಕೆಂದು ತೀರ್ಮಾನಿಸುತ್ತಿದ್ದಾರೆ; ನೀರಿನ ಮಟ್ಟಿಗೂ ಇದೆ ಮಾದರಿ ಹೊಂದುವಂತೆ ತೋರುತ್ತಿದೆ. ಭಾಷೆಯ ನೆಲೆಯಲ್ಲಿಯೂ ಈ ಮಾತು ನಿಜವೇ ಎನ್ನುವುದನ್ನು ಈಗ ನಾವು ಗಮನಿಸಬೇಕಾಗಿದೆ. ಸ್ವತ್ತಿನ ಹಕ್ಕಿನ ಉಲ್ಲಂಘನೆ ಸುಲಭವಾಗಿ ಗುರುತಿಸುವಂತಿರುವ ಕೆಲಲವು ಪ್ರಸಂಗಗಳನ್ನು ಮೊದಲು ನೋಡೋಣ.

ಜಗತ್ತಿನಲ್ಲೆಲ್ಲಾ ಜನ ಸಮುದಾಯಗಳು ತಾವು ಹುಟ್ಟಿದ ನೆಲೆಗಳನ್ನು ತೊರೆದು ಬೇರೆಬೇರೆ ಕಡೆಗಳಿಗೆ ಹೋಗಿ ಬದುಕಿನ ದಾರಿಗಳನ್ನು ಹುಡುಕಿಕೊಳ್ಳುತ್ತಿದ್ದಾರೆ. ನೆಲದ ಮೇಲಿನ ಹಕ್ಕು ಯಾರಿಗೆ ಸೇರಿದ್ದು ಎಂಬ ಬಗೆಗೆ ಈಗಾಗಲೇ ಒಪ್ಪಿಕೊಂಡಿರುವ ವಿಭಜಬೆಯ ನೆಲೆಯಲ್ಲಿ ಹೀಗೆ ಒಂದೆಡೆಯಿಂದ ಇನ್ನೊಂದೆಡೆಗೆ ಹೋಗುವುದನ್ನು ವಲಸೆಗಳೆಂದು ಕರೆಯುವುದು ರೂಢಿಯಲ್ಲಿದೆ. ಹೀಗೆ ವಲಸೆ ಹೋದವರಿಗೆ ಮೂಲ ನಿವಾಸಿಗಳಿಗೆ ಒದಗುವ ಎಲ್ಲ ಹಕ್ಕುಗಳೂ ದೊರಕುವುದಿಲ್ಲ. ಇದು ಭಾಷೆಯ ಮಟ್ಟಿಗೂ ನಿಜ. ವಲಸೆ ಬಂದವರು ತಮ್ಮ ಸ್ವತ್ತಾದ ಭಾಷೆಯನ್ನು ಹೇಗೆ ಬಳಸಬೇಕು ಇಲ್ಲವೇ ಅದನ್ನು ಬಳಸಬೇಕೆ ಬೇಡವೇ ಎಂಬುದನ್ನು ನಿರ್ಧರಿಸುವವರು ಸ್ವತಃ ಅವರಲ್ಲ. ಅವರು ವಲಸೆ ನಿಂತ ನಾಡಿನ ಕೆಲವರು. ಹೀಗೆ ಮಾಡುವಾಗ ವಲಸೆ ಸಮುದಾಯಗಳು ತಮ್ಮ ಭಾಷೆಯ ಮೇಲಿನ ಹಕ್ಕನ್ನು ನಿಧಾನವಾಗಿ ಕಳೆದುಕೊಳ್ಳುತ್ತಾರೆ. ಬೇರೊಂದು ಭಾಷೆಯನ್ನು ಬಳಸುವವರಾಗಬೇಕಾಗುತ್ತದೆ. ಆ ಭಾಷೆಯನ್ನು ಅವರು ಬಳಸುತ್ತಿದ್ದರೂ ಅದರ ಹಕ್ಕುದಾರಿಕೆಯಲ್ಲಿ ಅವರಿಗೆ ಪಾಲಿರುವುದಿಲ್ಲ. ಟರ್ಕಿ,ಇರಾಕ್ ಮತ್ತು ಇರಾನ್ ನಾಡುಗಳ ನಡುವೆ ಇರುವ ಗುಡ್ಡಗಾಡು ಪ್ರದೇಶದಲ್ಲಿ ಕುರ್ದ್ ಎಂಬ ಸಮುದಾಯವಿದೆ. ಇವರು ಆಡುವ ಕುರ್ದಿಶ್ ಭಾಷೆಯು ಅವರ ಸ್ವತ್ತಾಗಿ ಇರಬೇಕೋ ಇಲ್ಲವೇ ಅವರು ಅದನ್ನು ಬಿಟ್ಟುಕೊಟ್ಟು ಟರ್ಕಿಶ್,ಪರ್ಶಿಯನ್ ಇಲ್ಲವೇ ಇರಾಕಿಗಳಿಗೆ ಒಗ್ಗಿಕೊಳ್ಳಬೇಕೋ ಎಂಬುದು ಹಲವು ದಶಕಗಳ ಹೋರಾಟದ ಸಂಗತಿಯಾಗಿದೆ. ಹೀಗೆಯೇ ನೂರಾರು ಕಡೆಗಳಲ್ಲಿ ವಲಸೆ ಸಮುದಾಯಗಳು ತಮ್ಮ ಭಾಷೆಯೆಂಬ ಸ್ವತ್ತಿನ ಮೇಲಿನ ಹಕ್ಕನ್ನು ಕಳೆದುಕೊಳ್ಳುತ್ತಿವೆ.ಅಮೇರಿಕಾ ದೇಶದಲ್ಲಿ ರೆಡ್ ಇಂಡಿಯನ್ ಸಮುದಾಯಗಳು ತಮ್ಮ ಭಾಷೆಗಳನ್ನು ಕಳೆದುಕೊಂಡದ್ದು ಒಂದು ಕತೆಯಾದರೆ ಈಗ ಆ ನಾಡಿನಲ್ಲಿ ಇರುವ ದೊಡ್ಡ ವಲಸೆ ಸಮುದಾಯ ಸ್ಪಾನಿಶ್ ಮಾತಾಡುವವರದಾಗಿದ್ದು ಅವರು ತಮ್ಮ ನುಡಿಯನ್ನು ಕಾಯ್ದುಕೊಳ್ಳಲು ಎಚ್ಚರದ ಹೆಜ್ಜೆಗಳನ್ನು ಇರಿಸಬೇಕಾಗಿದೆ. ಈ ಎಲ್ಲ ಅಂಶಗಳನ್ನು ಮನಗಂಡು ಮಾನವ ಹಕ್ಕುಗಳ ಪಟ್ಟಿಯಲ್ಲಿ ಭಾಷೆಯೆಂಬ ಸ್ವತ್ತಿನ ಹಕ್ಕನ್ನೂ ಕೂಡ ಈಗ ಸೇರಿಸಲಾಗಿದೆಯಾದರೂ ಅದನ್ನು ಉಳಿಸಿಕೊಳ್ಳಲು ದೊಡ್ಡದೊಡ್ಡ ಹೋರಾಟಗಳು ನಡೆಯುವುದು ಅನುವಾರ್ಯವಾಗುತ್ತಿದೆ.

ಇದು ಒಂದು ನೆಲೆ. ಇನ್ನೊಂದು ನೆಲೆ ಬೇರೆಯದೇ ಬಗೆಯದ್ದು. ಇಲ್ಲಿ ಒಂದೇ ಭಾಷೆಯನ್ನಾಡುವ ಜನ ಸಮುದಾಯದಲ್ಲಿ ಆ ಭಾಷೆ ಯಾರ ಸ್ವತ್ತು ಎಂಬುದನ್ನು ಗೊತ್ತು ಮಾಡುವುದು ಕಷ್ಟವಾಗುವಂತಹ ಸನ್ನಿವೇಶಗಳು ನಿರ್ಮಾಣವಾಗುತ್ತವೆ. ಭಾಷೆಯ ಸಂಪನ್ಮೂಲಗಳ ಸ್ವರೂಪವನ್ನು ನಿರ್ಧರಿಸುವಲ್ಲಿ ,ಅದರ ಬಳಕೆಯ ಮಾದರಿಗಳ ಚೌಕಟ್ಟುಗಳನ್ನು ರೂಪಿಸುವಲ್ಲಿ ಕೆಲವರು ಮಾತ್ರ ನಿರ್ಣಯಗಳನ್ನು ಮಾಡುವವರಾಗಿದ್ದು ಉಳಿದೆಲ್ಲ ಜನರೂ ಆ ನಿರ್ದೇಶನಗಳನ್ನು ಮತ್ತು ಮಾದರಿಗಳನ್ನು ಅನುಸರಿಸುವ ಇಕ್ಕಟ್ಟು ರೂಪುಗೊಳ್ಳುತ್ತದೆ. ಈ ನಿರ್ದೇಶನಗಳನ್ನು ಮೀರಿದ ಭಾಷಾ ಬಳಕೆಗೆ ಅಧಿಕೃತ ಮನ್ನಣೆ ದೊರೆಯುವುದಿಲ್ಲ; ಅದನ್ನು ಅಂಚಿನ ಬಳಕೆಯೆಂದು,ಅದಕ್ಕೆ ಮಾನ್ಯತೆ ನೀಡುವ ಅಗತ್ಯವಿಲ್ಲವೆಂದು ತೀರ್ಮಾನಿಸಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಭಾಷೆ ಎಲ್ಲರ ಸ್ವತ್ತು ಎನ್ನುವ ತಿಳುವಳಿಕೆಗೆ ಯಾವ ಬೆಲೆಯೂ ಇಲ್ಲವಾಗುತ್ತದೆ.

ಈ ಬಗೆಯ ನಿರ್ದೇಶನಗಳನ್ನು ಕೊಡುವವರು ತಮ್ಮ ಕ್ರಮವನ್ನು ಸರಿಯೆಂದು ಒಪ್ಪಿಸಲು ತಕ್ಕ ಕಾರಣಗಳನ್ನು ಮುಂದೊಡ್ಡುತ್ತಾರೆ. ಭಾಷೆ ಎಲ್ಲರ ಸ್ವತ್ತಾಗಿರುವುದರಿಂದ ಅದರ ಬಳಕೆಯೂ ಕೂಡ ಎಲ್ಲರಿಗೂ ’ಅನುಕೂಲ’ವಾಗುವಂತೆ ಇರಬೇಕು ಎನ್ನುವುದು ಒಂದು ಕಾರಣ. ಎಲ್ಲರಿಗೂ ಸಮಾನವಾದ ರೂಪವೊಂದನ್ನು ಮುಂದಿಡುವ ಮೂಲಕ ಮತ್ತು ಅದನ್ನು ಬಳಸಲು ಕಲಿಸಿಕೊಡುವ ಮೂಲಕ ಭಾಷೆಯನ್ನು ಆಡುವವರ ನಡುವೆ ಇರುವ ’ಅಸಮಾನತೆ’ಗಳನ್ನು ನಿವಾರಿಸುವ ದಾರಿಯಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟಂತಾಯಿತು ಎನ್ನುವುದು ಇನ್ನೊಂದು ಕಾರಣ. ಆದರೆ ಈ ಈ ಕಾರಣಗಳ ಹಿಂದೆ ಇರುವ ತರ್ಕವನ್ನು ಎಚ್ಚರಿಕೆಯಿಂದ ಗಮನಿಸಬೇಕು. ಬಳಕೆಗೆ ಎಲ್ಲರಿಗೂ ಅನುಕೂಲವಾಗಿಸುವುದು ಮತ್ತು ಅಸಮಾನತೆಯನ್ನು ತೆಗೆದು ಹಾಕುವುದು ಎಂಬುದು ಪರುವದ ಊಟವನ್ನು ತಯಾರಿಸಿದಂತಲ್ಲ. ಎಲ್ಲರೂ ಒಟ್ಟಿಗೆ ಕುಳಿತು ಊಟಮಾಡುವಾಗ ತಯಾರಿಸುವ ಅಡುಗೆಯಂತಲ್ಲ. ಭಾಷೆಯು ಎಲ್ಲರಿಗೂ ಸೇರಿದ ಸ್ವತ್ತಾಗಿರುವುದರಿಂದ ಅದರ ಬಳಕೆಯೂ ಅವರವರ ಅಗತ್ಯಕ್ಕೆ ತಕ್ಕಂತೆ ಬೇರೆಬೇರೆಯಾಗಿರುವುದೇ ಹೆಚ್ಚು ಸಹಜವಾದುದು. ಇದು ಎಲ್ಲರಿಗೂ ತಿಳಿಯಲಾರದೆಂಬ ಕಾರಣವನ್ನು ಮುಂದೊಡ್ಡಿ ಎಲ್ಲರಿಗೂ ತಿಳಿಯುವ ಮಾದರಿಯೊಂದಿದೆ ಎನ್ನುವ ಭ್ರಮೆಯೊಂದನ್ನು ಹುಟ್ಟಿ ಹಾಕಲಾಗುತ್ತದೆ. ಭಿನ್ನತೆಯಲ್ಲಿ ಅಡ್ಡಿಗಳಿಲ್ಲ;ಆದರೆ ಆ ಭಿನ್ನತೆಗಳು ತರತಮದ ನೆಲೆಗಳಾಗಿ ಬದಲಾದಾಗ ಮಾತ್ರ ಅಡ್ಡಿಗಳು ಹುಟ್ಟಿಕೊಳ್ಳುತ್ತವೆ. ಅಂದರೆ ಬಹುತ್ವವೆನ್ನುವುದರಲ್ಲಿ ತೊಂದರೆಯಿಲ್ಲ. ಬಹುತ್ವದ ನಿರ್ವಹಣೆಯ ತಂತ್ರಗಳನ್ನು ಸಮುದಾಯಕ್ಕೆ ಒದಗಿಸಿಕೊಡಬೇಕಾಗುತ್ತದೆ.

ಇದಲ್ಲದೆ ಇಂದೇ ಸಮುದಾಯ ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ತನ್ನ ಸ್ವತ್ತುಗಳನ್ನಾಗಿ ಪಡೆದಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಇಲ್ಲಿಯೂ ಆಯಾ ಭಾಷೆಗಳನ್ನು ಆಡುವ ಕೆಲವರ ನಿರ್ಧಾರಗಳು ಮೇಲುಗೈ ಪಡೆದು ಸ್ವತ್ತಿನ ಜಂಟಿ ನಿರ್ವಹಣೆಗೆ ಹೊರಗಿನಿಂದ ನಿರ್ದೇಶನಗಳನ್ನು ನೀಡುವ ಪ್ರಸಂಗಗಳು ಹುಟ್ಟಿಕೊಳ್ಳುತ್ತವೆ. ಇದು ಇನ್ನೂ ಹೆಚ್ಚಿನ ಗೊಂದಲಕ್ಕೆ ಕಾರಣವಾಗುತ್ತದೆ. ಒಟ್ಟಾರೆಯಾಗಿ ಭಾಷೆಯು ಇತರ ನೈಸರ್ಗಿಕ ಮತ್ತು ನಿಸರ್ಗನೀಡಿದ ಸಾಮುದಾಯಿಕ ಹಕ್ಕಿನ ಸ್ವತ್ತು ಎನ್ನುವಾದದರೆ ಅದರ ಮೇಲಿನ ಸ್ವಾಮ್ಯ ಎಲ್ಲರಿಗೂ ಇರಬೇಕೆಂಬ ನಿಟ್ಟಿನಲ್ಲಿ ನಾವೀಗ ಭಾಷಾನೀತಿ ಮತ್ತು ಭಾಷಾ ಯೋಜನೆಗಳನ್ನು ರೂಪಿಸಬೇಕಾದ ದಿನಗಳು ಬಂದಿವೆ.

Wednesday, June 25, 2008

ನೆನಪುಮರವಿನ ಕಣ್ಣುಮುಚ್ಚಾಲೆಯಾಟ

ನೆನಪು ಮರೆವಿನ ಕಣ್ಣುಮುಚ್ಚಾಲೆಯಾಟ

ಹಾಳು ಮರೆವು ಎಂದು ಗೊಣಗದವರಿಲ್ಲ. ಮರೆವಿನ ನೆರವು ಪಡೆದು ತಮ್ಮ ಅರೆಕೊರೆಗಳನ್ನು ಮುಚ್ಚಿಟ್ಟುಕೊಳ್ಳುವುದು ಎಲ್ಲರೂ ಆಡುವ ಆಟವೇ ಸರಿ. ಹಾಗೆಯೇ ನೆನಪು ಚೆನ್ನಾಗಿರುವವರು ನಮ್ಮ ಮೆಚ್ಚುಗೆಯನ್ನು ಪಡೆಯುತ್ತಾರೆ.;ಜಾಣರೆಂದೆನಿಕೊಳ್ಳುತ್ತಾರೆ. ಈ ನೆನಪು ಮರೆವಿನ ಕಣ್ಣುಮುಚ್ಚಾಲೆಯಲ್ಲಿ ಭಾಷೆಗೇನಾದರೂ ಜಾಗವಿದೆಯೇ ಎನ್ನುವುದನ್ನು ಈಗ ನೋಡೋಣ. ನಮಗೆ ಒಬ್ಬರು ಚೆನ್ನಾಗಿ ಗೊತ್ತು ಎಂದಿಟ್ಟುಕೊಳ್ಳಿ. ಕೆಲಕಾಲ ನಮ್ಮ ಕಣ್ಣಿಗೆ ಬೀಳದಿದ್ದರೆ ಅವರನ್ನು ನಾವು ಮರೆಯುವುದುಂಟು. ಆದರೆ ಈ ಮರೆವಿಗೆ ಎರಡು ನೆಲೆಗಳಿವೆ. ಈಗ ಅವರು ನಮ್ಮ ಕಣ್ಣೆದುರಿಗೆ ಬಂದರೆ ಅವರು ನಮಗೆ ಗೊತ್ತಿರುವವರು ಎನಿಸಿದರೂ ಅವರ ಹೆಸರು ನಮ್ಮ ನೆನಪಿಗೆ ಬಾರದೇ ಹೋಗಬಹುದು. ಮತ್ತೆ ಕೆಲವೊಮ್ಮೆ ಅವರ ಹೆಸರು ನಮ್ಮ ನೆನಪಿನಲ್ಲಿ ಉಳಿದಿದ್ದರೂ ಅವರೇ ಎದುರಿಗೆ ಬಂದು ನಿಂತರೂ ನಾವು ಅವರನ್ನು ಗುರುತಿಸಿದೇ ಹೋಗಬಹುದು. ಇವೆಲ್ಲವೂ ನಮ್ಮೆಲ್ಲರಿಗೂ ಆಗಿರುವ ಅನುಭವಗಳೇ ಸರಿ. ಈ ಎರಡು ಬಗೆಯ ಮರೆವನ್ನು ಭಾಷೆಯ ನೆರವಿನಿಂದ ಅರಿತುಕೊಳ್ಳೋಣ. ಒಂದು ಪದಕ್ಕೆ ದನಿಯ ನೆಲೆ ಇರುವಂತೆ ತಿರುಳಿನ ನೆಲೆಯೂ ಇರುವುದಷ್ಟೆ. ಬಲ್ಲವರು ಈ ಎರಡು ನೆಲೆಗಳನ್ನು ಪದ-ಪದಾರ್ಥಗಳ ನೆಲೆ ಎಂದಿದ್ದಾರೆ. ದನಿ ಮತ್ತು ತಿರುಳುಗಳೆರಡೂ ನಮಗೆ ಗೊತ್ತಿದ್ದರೆ ಆ ಪದವನ್ನು ಬಳಸಬಹುದು. ಇವೆರಡರಲ್ಲಿ ಯಾವುದೊಂದನ್ನು ಮರೆತರೂ ನಾವು ಗೊಂದಲಕ್ಕೆ ಒಳಗಾಗುತ್ತೇವೆ.;ಎರಡನ್ನೂ ಮರೆತರಂತೂ ನಮ್ಮ ಪಾಡು ಇನ್ನಷ್ಟು ಇಕ್ಕಟ್ಟಿಗೆ ಸಿಕ್ಕುವುದು. ನಾವು ನೆನಪಿಟ್ಟುಕೊಳ್ಳುವ ಬಗೆಯಲ್ಲೂ ಈ ಎರಡು ನೆಲೆಗಳಿರುವಂತೆ ತೋರುತ್ತದೆ. ನೆನಪಿನ ’ದನಿಯ’ನೆಲೆ ಒಂದು; ನೆನಪಿನ ತಿರುಳಿನ ನೆಲೆ ಇನ್ನೊಂದು. ’ದನಿ’ ಯ ನೆಲೆ ಮರೆತರೆ ಏನೋ ಮರೆತಂತೆ ಅನ್ನಿಸುತ್ತದೆ. ಆದರೆ ಏನು ಮರೆತೆವೆಂದು ಹೇಳಲಾರೆವು. ’ತಿರುಳಿನ’ ನೆಲೆ ಮರೆತರೆ ಬೇರೇನೋ ನೆನಪಿಗೆ ಬರುತ್ತದೆಯಾದರೂ ಬೇಕಾದ್ದು ನೆನಪಿಗೆ ಬರುವುದಿಲ್ಲ.ಒಮ್ಮೆ ಕಲಿತ ಹಾಡೊಂದನ್ನು ಈಗ ನೆನೆದುಕೊಳ್ಳಿ. ಸರಿಯಾಗಿ ಹೇಳಲು ಬಂದರೆ ಸರಿ. ಮರೆತಿದ್ದರೆ ಏನಾಗುವುದೆಂದು ನೋಡಿ. ಆ ಹಾಡಿನ ಧಾಟಿ ಮರೆತಿದ್ದರೆ ಅದರ ಪದಗಳನ್ನು ನೆನಪಿಟ್ಟುಕೊಂಡಿದ್ದರೂ ಹಾಡಲಾಗುವುದಿಲ್ಲ. ಧಾಟಿ ನೆನಪಿದ್ದು ಪದಗಳು ಮರೆತಿದ್ದರೆ ನಾವು ಹಾಡನ್ನು ಗುನುಗ ತೊಡಗುತ್ತೇವೆ. ಸಾಲುಗಟ್ಟಲೆ ಗುನುಗಿಯೇ ಹಾಡಿ ಮುಗಿಸುತ್ತೇವೆ. ಮೊದಲನೆಯದು ’ದನಿ’ ಯ ನೆಲೆಯ ಮರೆವು;ಎರಡನೆಯದು ’ತಿರುಳಿನ’ನೆಲೆಯ ಮರೆವು.

ಸರಿ. ಹೀಗೇಕಾಗುತ್ತದೆ? ಹಿಂದೆ ಈ ಅಂಕಣದಲ್ಲಿ ಬರೆದಿದ್ದ ಒಂದು ಮಾತನ್ನು ಮರೆತಿದ್ದರೆ ನೆನಪು ಮಾಡಿಕೊಳ್ಳಿ. ನಮ್ಮ ಮೆದುಳಿನಲ್ಲಿ ದನಿ ಮತ್ತು ತಿರುಳನ್ನು ಕೂಡಿಟ್ಟುಕೊಳ್ಳುವ ಮತ್ತು ಮರಳಿ ನಮ್ಮ ಬಳಕೆಗೆ ಒದಗಿಸುವ ತಾಣಗಳು ಬೇರೆಬೇರೆಯಾಗಿವೆ. ದನಿಯ ನೆಲೆಯು ಬ್ರಾಕಾನ ತಾಣದಲ್ಲಿದ್ದರೆ ತಿರುಳಿನ ನೆಲೆಯು ವರ್ನಿಕೆಯ ತಾಣದಲ್ಲಿರುತ್ತದೆ. ಇವೆರಡಲ್ಲಿ ಯಾವೊಂದು ತಾಣಕ್ಕೆ ತೊಂದರೆಯಾದರೂ ಮಾತು ಕಟ್ಟುತ್ತದೆ. ಅಂದರೆ ನೆನಪು ಕುಗ್ಗುತ್ತದೆ. ಬ್ರಾಕಾನ ತಾಣಕ್ಕೆ ತೊಂದರೆಯಾದರೆ ಏನನ್ನೋ ಹೇಳಬೇಕೆಂದರೂ ಹೇಳಲು ತಕ್ಕ ಪದಗಳು ದಕ್ಕುವುದಿಲ್ಲ. ಏಕೆಂದರೆ ಆ ಪದಗಳನ್ನು ದನಿಯ ನೆಲೆಗೆ ಒಯ್ಯುಲು ನಮಗೆ ಆಗುವುದಿಲ್ಲ. ಹಾಗೆಯೇ ವರ್ನಿಕೆಯ ತಾಣಕ್ಕೆ ತೊಂದರೆಯಾದರೆ ಏನು ಹೇಳಬೇಕೆಂದಿರುತ್ತೇವೋ ಅದನ್ನು ಹೇಳಲಾಗದೆ ಬೇರೆ ಏನನ್ನೋ ಹೇಳುತ್ತಿರುತ್ತೇವೆ. ಮರ ಎನ್ನುವ ಬದಲು ಹಕ್ಕಿ,ಹಣ್ಣು, ಎಲೆ, ದೆವ್ವ ಹೀಗೆ ಏನನ್ನಾದರೂ ( ಆದರೂ ಮರದೊಡನೆ ನಂಟಿರುವ ಯಾವುದೋ ಪದವನ್ನು) ಹೇಳಬಹುದು. ನೆನಪುಗಳೆಲ್ಲವೂ ಭಾಷೆಯೊಡನೆ ನಂಟನ್ನು ಪಡೆದಿರುತ್ತವೆಂದು ಹೇಳಲಾಗದು. ಆದರೂ ನೆನಪಿನ ಕಟ್ಟೋಣಕ್ಕೂ ಭಾಷೆಯ ಕಟ್ಟೋಣಕ್ಕೂ ಹೊಂದಾಣಿಕೆ ಇದೆ ಎನ್ನುವುದಂತೂ ದಿಟ. ಅಂದರೆ ಭಾಷೆಯಲ್ಲಿ ಇರುವ ಎರಡು ನೆಲೆಗಳಂತೆ ನೆನಪಿಗೂ ಎರಡು ನೆಲೆಗಳಿರುತ್ತವೆ ಎಂದಾಯ್ತು.

ನೆನಪಿಟ್ಟುಕೊಳ್ಳುವುದು ಎಂದರೇನು? ಬೇಕಾದಾಗ,ಬೇಕಾದ್ದು ಬೇಕಾದಷ್ಟು ನಮ್ಮ ಎಚ್ಚರದ ನೆಲೆಗೆ ಬಂದರೆ ಅದನ್ನು ನೆನಪು ಎನ್ನುತ್ತೇವೆ ತಾನೆ? ಹೀಗೆ ನೆನಪಿಟ್ಟುಕೊಳ್ಳುವವರ ಬಗೆಗಳನ್ನು ಗಮನಿಸಿ. ಕೆಲವರು ಮಾತಾಡುವಾಗ ಯಾವುದೋ ಗಾದೆ ಮಾತನ್ನು ಹೇಳಬೇಕೆಂದು ಬಯಸುತ್ತಾರೆ. ಆದರೆ ಆ ಗಾದೆ ನೆನಪಿಗೆ ಬರುವುದಿಲ್ಲ. ಅದರ ಬದಲಿಗೆ ’ಅದೇನೋ ಅಂತಾರಲ್ಲ ಹಾಗಾಯ್ತು ನಿನ್ನ ಕತೆ’ ಎಂದು ಬಿಡುತ್ತಾರೆ. ಇವರು ಪದವನ್ನು ಮರೆತು ಹಾಡು ಗುನುಗುವ ಬಗೆಯವರು. ಮತ್ತೆ ಕೆಲವರು ಗಂಟೆಗಟ್ಟಲೆ ಒಂದು ಕತೆಯನ್ನು ಹಾಡಿನಲ್ಲಿ ಹೇಳುವವರಿದ್ದಾರೆಂದು ಕೊಳ್ಳಿ. ಇವರು ಎಂದೋ ಯಾರೋ ಹೇಳಿದ ಹಾಡನ್ನು ’ಕಲಿತು’ ತಾವೂ ಹೇಳ ತೊಡಗಿದವರು. ಮತ್ತೆ ಮತ್ತೆ ಅದೇ ಹಾಡನ್ನು ಹೇಳಬಲ್ಲರು. ಇಂತವರು ಆ ಹಾಡನ್ನು ಹೇಗೆ ನೆನಪಿಟ್ಟುಕೊಳ್ಳುತ್ತಾರೆಂಬುದು ಒಂದು ಸೋಜಿಗ. ಕೆಲವರು ಹೇಳುವಂತೆ ಆ ಹಾಡಿನಲ್ಲಿ ಮತ್ತೆ ಮತ್ತೆ ಬರುವ ಕೆಲವು ಮಾತುಗಳಿರುತ್ತವೆ; ಹಾಗೆಯೇ ಅದರ ಓಟವನ್ನು ಕಟ್ಟಿಕೊಡುವ ಧಾಟಿಯೊಂದಿರುತ್ತದೆ. ಆ ಧಾಟಿ ಕೂಡ ಮತ್ತೆ ಮತ್ತೆ ಬರುತ್ತಲೇ ಇರುತ್ತದೆ. ಈ ಎರಡೂ ನೆಲೆಗಳು ಆ ನೀಳವಾದ ಹಾಡನ್ನು ಮರೆಯದಂತೆ ನೆನಪಿಟ್ಟುಕೊಳ್ಳಲು ಆ ಹಾಡುಗಾರರಿಗೆ ನೆರವಾಗುತ್ತವೆ. (ಚಿಕ್ಕವರಿದ್ದಾಗ ನಮಗೆ’ಕಲಿಸಿದ’/ ನಾವು ’ ಕಲಿತ’ ಮಕ್ಕಳ ಹಾಡುಗಳನ್ನು ಈಗ ಒಮ್ಮೆ ನೆನಪು ಮಾಡಿಕೊಂಡರೆ ಈ ಮೇಲೆ ಹೇಳಿದ್ದು ಇನ್ನಷು ಚೆನ್ನಾಗಿ ಗೊತ್ತಾಗುತ್ತದೆ.)

ಮರೆಯದೇ ಇರಬೇಕೆಂದು ನಾವೆಲ್ಲರೂ ಬಯಸುವವರು. ’ ನಾನು ಹೇಳಿದ್ದನ್ನು ಸೆರಗಿಗೆ ಗಂಟು ಹಾಕಿಟ್ಟುಕೋ, ಮರೀಬೇಡ’ ಎನ್ನುವವರುಂಟು. ’ಆಗಿದ್ದನ್ನೆಲ್ಲ ಕಂಕುಳಲ್ಲಿರಿಸಿಕೊಂಡಿದ್ದೇನೆ, ಮರೆತೇನೆಯೇ’ ಎಂದು ಮತ್ತೆ ಕೆಲವರು ಹೇಳುತ್ತಾರೆ. ನೆನಪಿಟ್ಟುಕೊಳ್ಳುವುದಕ್ಕೂ ಅವರು ಹೇಳುತ್ತಿರುವ ಕೆಲಸಕ್ಕೂ ಏನೂ ನಂಟಿಲ್ಲ. ಆದರೂ ಹೀಗೆ ಹೇಳುವುದೇಕೆ? ಸೆರಗಿನ ಗಂಟನ್ನು ನೋಡಿದಾಗ ಏನನ್ನೋ ನೆನಪಿಸಿಕೊಳ್ಳಬೇಕೆಂದು ಅನಿಸುತ್ತದೆ; ಆಗ ಅದನ್ನು ನೆನಪಿಸಿಕೊಳ್ಳುತ್ತೇವೆ ಎನ್ನಬಹುದೇ? ಅದೇನೋ ಸರಿ. ಆದರೆ ಏನೋ ನೆನಪಿಟ್ಟುಕೊಳ್ಳ ಬೇಕಿತ್ತು ಎನ್ನುವುದಷ್ಟೆ ನೆನಪಿಗೆ ಬಂದು ಏನು ನೆನಪಿಸಿಕೊಳ್ಳಬೇಕೋ ಅದೇ ಮರೆತು ಹೋದರೇನು ಮಾಡುವುದು? ಮನೆಗೆ ಬರುವಾಗ ಅಂಗಡಿಯಿಂದ ಏನನ್ನೋ ತರಲು ಮನೆಯಲ್ಲಿ ಹೇಳಿದ್ದಾರೆಂದುಕೊಳ್ಳಿ. ಹಿಂದಿರುಗಿ ಬರುವಾಗ ಅಂಗಡಿ ಕಣ್ಣಿಗೆ ಬೀಳುತ್ತದೆ. ಏನನ್ನೋ ಇಲ್ಲಿಂದ ತೆಗೆದುಕೊಂಡು ಹೋಗಬೇಕಿದೆ ಎನ್ನುವುದು ನೆನಪಿಗೆ ಬರುತ್ತದೆ. ಆದರೆ ಏನದು ಎಂಬುದು ನೆನಪಿಗೆ ಬರುವುದಿಲ್ಲ. ಇದನ್ನು ನೆನಪು ಎನ್ನಬೇಕೋ ಮರೆವು ಎನ್ನಬೇಕೋ?

ಭಾಷೆಯ ನೆಲೆಯ ನೆನಪುಗಳು ಹೇಗೆ ನೆಲೆಗೊಂಡಿರುತ್ತವೆ ಎನ್ನುವುದನ್ನು ತಿಳಿಯಲು ಹಲವರು ಮುಂದಾಗಿದ್ದಾರೆ; ಆ ದಿಕ್ಕಿನಲ್ಲಿ ತುಂಬ ಕೆಲಸಗಳನ್ನು ಮಾಡಿದ್ದಾರೆ. ಅವರ ತಿಳುವಳಿಕೆಯನ್ನು ಈಗ ಕೊಂಚ ಗೊತ್ತು ಮಾಡಿಕೊಳ್ಳೋಣ. ನಾವು ಒಂದು ಪದವನ್ನು ನೆನಪಿನಲ್ಲಿರಿಸಿಕೊಳ್ಳಲು ಇಲ್ಲವೇ ಅದನ್ನು ನೆನಪು ಮಾಡಿಕೊಳ್ಳಲು ಎರಡು ದಾರಿಗಳನ್ನು ಹಿಡಿಯಬಹುದು. ಒಂದು: ಆ ಪದದ ದನಿಯ ಹೋಲಿಕೆ ಇರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಎರಡು; ಆ ಪದದ ತಿರುಳಿನೊಡನೆ ನಂಟಿರುವ ಪದಗಳನ್ನು ನೆನಪಿಗೆ ತಂದುಕೊಳ್ಳುವುದು. ಕವಿಗಳು ತಮ್ಮ ಕವಿತೆಗಳಲ್ಲಿ ಪದಗಳನ್ನು ಜೋಡಿಸುವಾಗ ಈ ಎರಡೂ ಹಾದಿಗಳನ್ನು ಹಿಡಿಯುತ್ತಾರೆ. ’ಯಾರಾಗ ಹಾಡಿದರೂ ಯಾರಾಗ ಕೇಳುವರು’ ’ಗಿಡಗಂಟಿಯಾ ಕೊರಳೊಳಗಿಂದ ಹಕ್ಕಿಗಳ ಹಾಡು’ ಈ ಎರಡೂ ಸಾಲುಗಳಲ್ಲಿ ಮೊದಲನೆಯದು ಒಂದು ಪದದ ದನಿಯ ನೆಲೆಯ ನಂಟನ್ನು ಹೊಂದಿರುವ ಇನ್ನೊಂದು ಪದವನ್ನು ಜೋಡಿಸಿಟ್ಟುಕೊಂಡಿದೆ. ’ಯಾ(ವ)ರಾಗ ಹಾಡಿದರೂ ಯಾರಾ(ರು,ಆ)ಗ ಕೇಳುವರು.’ ಎರಡನೆಯ ಸಾಲಿನಲ್ಲಿ ತಿರುಳಿನ ನಂಟಿರುವ ಪದವನ್ನು ಬಳಸಿಕೊಳ್ಳಲಾಗಿದೆ.ಗಿಡಗಳ ಕೊರಳು ಅ ಗಿಡದಲ್ಲಿ ಅಡಗಿದ ಹಕ್ಕಿಗಳ ಕೊರಳಾಗಿ ಬಿಡುತ್ತದೆ. ಈ ಸಾಲುಗಳನ್ನು ಇಲ್ಲಿ ಹೇಳಿದ್ದೇಕೆ? ಭಾಷೆಯಲ್ಲಿ ಈ ಹಾದಿಗಳನ್ನು ಹಿಡಿದು ನಾವು ನೆನಪಿಟ್ಟುಕೊಳ್ಳ ಬೇಕಾದ್ದನ್ನು ಮರೆಯದಂತೆ ನೋಡಿಕೊಳ್ಳುತ್ತೇವೆ ಎಂಬುದನ್ನು ಗುರುತಿಸಿಕೊಳ್ಳಬೇಕು. ಈ ಎರಡು ಹಾದಿಗಳಲ್ಲಿ ಒಂದು ಹೋಲಿಕೆಯನ್ನು(=ಸಾದೃಶ್ಯವನ್ನು) ನೆಮ್ಮಿದರೆ ಇನ್ನೊಂದು ನಂಟನ್ನು (=ಸಂಬಂಧವನ್ನು) ನೆಮ್ಮುತ್ತದೆ.

ನಮ್ಮ ಸಂಸ್ಕೃತಿಯಲ್ಲಿ ಕೂಡಿಕೊಂಡ ನೆನಪುಗಳು ಕೂಡ ಹೀಗೆ ಹೋಲಿಕೆ ಮತ್ತು ನಂಟನ್ನು ನೆಮ್ಮಿಕೊಂಡಿರುತ್ತವೆ. ಇಲ್ಲಿರುವ ನೂರಾರು ಆಚರಣೆಗಳು, ಕತೆಗಳು, ಹಾಡುಗಳು ಹೀಗೆ ನೆನಪಿಗೆ ನೆರವಾಗುವ ಮೀಟುಗೋಲಾಗುವ ಬಯಕೆಯನ್ನು ಹೊಂದಿರುತ್ತವೆ. ಆದರೆ ಅವೆಲ್ಲವೂ ದಿನಕಳೆದಂತೆ ಹೀಗೆ ನೆನಪಿಗೆ ತಂದುಕೊಡಬಲ್ಲ ನೆಲೆಯನ್ನು ಕಾಯ್ದುಕೊಳ್ಳುತ್ತವೋ ಇಲ್ಲವೇ ಅದನ್ನು ಕಳೆದುಕೊಳ್ಳುತ್ತವೋ ಎನ್ನುವುದು ಬೇರೆಯ ಮಾತು. ನೆನಪು ಮರೆವಿನ ಕಣ್ಣು ಮಚ್ಚಾಲೆಯಾಟ ಒಬ್ಬೊಬ್ಬರ ಮಟ್ಟಿಗೆ ಎಷ್ಟು ದಿಟವೋ ಇಡೀ ಸಮುದಾಯಕ್ಕೂ ಅಷ್ಟೇ ದಿಟ.

Monday, February 26, 2007

ಯಾವ ಭಾಷೆಯ ಮೂಲಕ ಕಲಿಯಬೇಕು?

ಮಕ್ಕಳು ಯಾವ ಭಾಷೆಯ ಮೂಲಕ ಚೆನ್ನಾಗಿ ಕಲಿಯುತ್ತಾರೆ ಎನ್ನುವ ವಿಷಯವನ್ನು ಕುರಿತು ವಾದವಿವಾದಗಳು ನಡೆಯುತ್ತಲೇ ಇವೆ. ಕರ್ನಾಟಕದಲ್ಲಿ ನಡೆಯುತ್ತಿರುವ ಈ ವಿವಾದಕ್ಕೆ ಎರಡು ಪಕ್ಷಗಳಿವೆ. ಒಂದು ಪಕ್ಷದವರು ಕನ್ನಡ ಪರವಾದವರು;ಇನ್ನೊಂದು ಪಕ್ಷದವರನ್ನು ಮೊದಲ ಪಕ್ಷದವರು ಕನ್ನಡ ವಿರೋಧಿಗಳು ಎಂದು ಗುರುತಿಸುತ್ತಾರೆ. ಕನ್ನಡ ಪರವಾದ ವಾದಿಗಳು ಮಕ್ಕಳಿಗೆ ಕನ್ನಡದ ಮೂಲಕ ಕಲಿಸುವುದು ಸರಿಯಾದ ಬಗೆಯೆಂದು ವಾದಿಸುತ್ತಾರೆ. ತಮ್ಮ ವಾದದ ಸಮರ್ಥನೆಗೆ ಎರದು ದಾರಿಗಳನ್ನು ಅವರು ಹಿಡಿಯುತ್ತಾರೆ. ಮೊದಲನೆಯದು ಭಾವನಾತ್ಮಕವಾದುದು. ಮಗುವಿಗೆ ಪರಿಚಿತವಾದ ಮೊದಲ ನುಡಿಯಲ್ಲೇ ಕಲಿಕೆ ನಡೆಯುವುದು ಹೆಚ್ಚು ಸರಿಯೆಂದೂ ಅದಿನ್ನೂ ಕಲಿತಿಲ್ಲದ ಬೇರೆ ಭಾಷೆಯ ಮೂಲಕ ಕಲಿಸುವುದರಿಂದ ಕಲಿಕೆ ಎನ್ನುವುದು ಹಿಂಸೆಯಾಗುತ್ತದೆಂದು ಹೇಳುತ್ತಾರೆ. ಇದಲ್ಲದೆ ಇನ್ನೊಂದು ಅಪಾಯದ ಸೂಚನೆಯನ್ನೂ ನೀಡುತ್ತಾರೆ. ಹೀಗೆ ಮಗುವಿಗೆ ಕನ್ನಡವಲ್ಲದ ಇನ್ನೊಂದು ಭಾಷೆಯ ಮೂಲಕ ಕಲಿಸುವುದರಿಂದ ಮಗು ಭಾವನಾತ್ಮಕವಾಗಿ ತನ್ನ ನುಡಿಯ ಪರಿಸರದಿಂದ ಹೊರಗುಳಿಯುತ್ತದೆಂದೂ ಹೀಗೆ ಹೊರಗುಳಿಯುವ ಮಕ್ಕಳು ಕನ್ನಡ ಸಂಸ್ಕೃತಿಗೆ ಅನ್ಯರಾಗುತ್ತಾರೆಂದು ಹೇಳುತ್ತಾರೆ. ಅವರ ವಾದದ ಇನ್ನೊಂದು ದಾರಿ ಕಲಿಕೆಯ ತಾತ್ವಿಕ ನೆಲೆಗಳಿಂದ ರೂಪಿತವಾದದ್ದು. ಪರಿಚಿತವಾದ್ದರಿಂದ ಅಪರಿಚಿತವಾದದ್ದರ ಕಡೆಗೆ ಕಲಿಕೆಯು ನಮ್ಮನ್ನು ಒಯ್ಯುವುದು ಎಂದು ನಂಬುವುದಾದರೆ ಮಗುವಿನ ಮೊದಲ ಭಾಷೆಯಲ್ಲೇ ಅದರ ಕಲಿಕೆ ನಡೆಯ ಬೇಕೆಂದು ಒಪ್ಪಲೇ ಬೇಕಾಗುತ್ತದೆಂದು ಈ ವಾದದ ತಿರುಳು.ಭಾರತದ ಸಂದರ್ಭದಲ್ಲಿ ಗಾಂಧಿ,ರವೀಂದ್ರನಾಥ ಟಾಗೋರರನ್ನು ಈ ವಾದದ ಸಮರ್ಥನೆಗಾಗಿ ಉಲ್ಲೇಖಿಸಲಾಗುತ್ತದೆ.

ಕನ್ನಡದ ಮೂಲಕವಲ್ಲದೆ ಬೇರೆ ಯಾವ ಭಾಷೆಗಳ ಮೂಲಕ ಕರ್ನಾಟಕದಲ್ಲಿ ಮಕ್ಕಳು ಕಲಿಯುತ್ತಿದ್ದಾರೆ? ಸಾಮಾನ್ಯವಾಗಿ ನೆರೆಯ ರಾಜ್ಯಗಳ ಭಾಷೆಗಳಾದ ತಮಿಳು,ತೆಲುಗು,ಮಲೆಯಾಳಮ್,ಮರಾಠಿಗಳ ಜೊತೆಗೆ ಉರ್ದು,ಹಿಂದಿಗಳ ಮೂಲಕವೂ ಸಾಕಷ್ಟು ಮಕ್ಕಳು ತಮ್ಮ ಶಾಲಾಶಿಕ್ಷಣದ ಮೊದಲ ಕೆಲವು ವರ್ಷಗಳ ಅವಧಿಯಲ್ಲಿ ಕಲಿಯುತ್ತಿದ್ದಾರೆ. ಇವೆಲ್ಲದರ ಜೊತೆಗೆ ಇಂಗ್ಲಿಶ್ ಕೂಡ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿದೆ. ಶಾಲಾಶಿಕ್ಷಣದ ಅನಂತರದ ಹಂತದಲ್ಲಿ ಇಂಗ್ಲಿಶ್ ಮಾತ್ರ ಅಧಿಕೃತ ಕಲಿಕೆಯ ಮಾಧ್ಯಮವಾಗಿದೆ. ಅನಧಿಕೃತವಾಗಿ ಮಾನವಿಕ ಅಧ್ಯಯನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕನ್ನಡವನ್ನು ಬಳಸಲಾಗುತ್ತಿದೆ. ಕರ್ನಾಟಕದ ಎಲ್ಲ ವಿಶ್ವವಿದ್ಯಾಲಯಗಳ(ಕನ್ನಡ ವಿಶ್ವವಿದ್ಯಾಲಯವನ್ನು ಹೊರತು ಪಡಿಸಿ) ಅಧಿಕೃತ ಶಿಕ್ಷಣ ಮಾಧ್ಯಮ ಇಂಗ್ಲಿಶ್ ಆಗಿದೆಯಾದರೂ ವಿದ್ಯಾರ್ಥಿಗಳು ಬಿ.ಎ, ಎಂ.ಎ ತರಗತಿಳಲ್ಲಿ ಉತ್ತರವನ್ನು ಬರೆಯುವುದಂತೂ ಕನ್ನಡದಲ್ಲೇ ಸರಿ. ಆದರೆ ವಿಜ್ಞಾನ ಮತ್ತು ತಾಂತ್ರಿಕ ವಿಷಯಗಳಲ್ಲಿ ಇಂಗ್ಲಿಶ್ ಇನ್ನೂ ತನ್ನ ಆಧಿಪತ್ಯವನ್ನು ಉಳಿಸಿಕೊಂಡಿದೆ. ಈ ವಿಷಯಗಳು ಸಾಮಾಜಿಕವಾಗಿ ಪಡೆದುಕೊಂಡಿರುವ ಮನ್ನಣೆಯಿಂದಾಗಿ ಕಲಿಕೆಯ ಮೊದಲ ಹಂತದಿಂದಲೇ ಇಂಗ್ಲಿಶ್ ಭಾಷೆಯನ್ನು ಮಾಧ್ಯಮವನ್ನಾಗಿ ಆಯ್ಕೆಮಾಡುವ ಪ್ರವೃತ್ತಿ ಹೆಚ್ಚಾಗಿದೆ. ಇದು ಸರಿಯೋ ತಪ್ಪೋ ಎಂಬುದು ಈಗ ಮುಖ್ಯ ಪ್ರಶ್ನೆಯಾಗಿ ಉಳಿದಿಲ್ಲ. ಇಂಗ್ಲಿಶಿನ ಮೂಲಕ ಕಲಿತರೂ ಕನ್ನಡದ ಸಾಹಚರ್ಯವನ್ನು ಮಕ್ಕಳಲ್ಲಿ ಉಳಿಸುವಂತೆ ಮಾಡುವುದು ಹೇಗೆ ಎಂಬುದಷ್ಟೇ ನಮಗೀಗ ಉಳಿದಿರುವ ಆಯ್ಕೆಯೆಂದು ತೋರುತ್ತದೆ.

ಆದರೆ ಮೊದಲ ಭಾಷೆ (ಕೆಲವರು ಹೇಳುವಂತೆ ಮಾತೃ ಭಾಷೆ)ಯ ಮೂಲಕ ಕಲಿಕೆ ನಡೆಯದಿದ್ದರೆ ಅದು ಮಕ್ಕಳಿಗೆ ಹಿಂಸೆಯಾಗುತ್ತದೆ ಎನ್ನುವುದನ್ನು ಸದ್ಯಕ್ಕೆ ಒಪ್ಪಿದರೂ ನಮ್ಮ ಸಮಾಜದ ರಚನೆಯ ಕೆಲವು ಲಕ್ಷಣಗಳ ಹಿನ್ನಲೆಯಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಉದಾಹರಣೆಗೆ ಭಾರತದಲ್ಲಿ ಅಧಿಕೃತವಾಗಿ ೧೬೫೦ ಮಾತೃ ಭಾಷೆಗಳನ್ನಾಡುವ ಜನರಿದ್ದಾರೆ. ಇವುಗಳಲ್ಲಿ ಕಲಿಕೆಯ ಮಾಧ್ಯಮವಾಗಿ ಬಳಕೆಯಾಗುತ್ತಿರುವ ಭಾಷೆಗಳ ಸಂಖ್ಯೆ ಐವತ್ತರ ಆಸುಪಾಸಿನಲ್ಲಿವೆ. ಉಳಿದ ಭಾಷೆಗಳ ಮೂಲಕ ಕಲಿಕೆ ನಡೆಸುವುದು ಸಾಧ್ಯವಾಗುತ್ತಿಲ್ಲ. ಹಾಗೆ ಕಲಿಸಲು ಮಾಡಿದ ಪ್ರಯತ್ನಗಳು ಪೂರ್ಣವಾಗಿ ಗೆಲುವನ್ನು ಕಂಡಿಲ್ಲ. ಆ ಭಾಷೆಗಳನ್ನಾಡುವ ಜನರು ತಮ್ಮ ಮಕ್ಕಳಿಗೆ ತಮ್ಮದೇ ಭಾಷೆಯ ಮೂಲಕ ಕಲಿಸುವುದರಿಂದ ಅವರಿಗಿರುವ ಅವಕಾಶಗಳು ಕಡಿಮೆಯಾಗುತ್ತವೆ ಎಂದು ವಾದಿಸುತ್ತಿದ್ದಾರೆ. ಕರ್ನಾಟಕದ ಪರಿಸ್ಥಿತಿ ಇದಕ್ಕಿಂತ ಬೇರೆಯಾಗಿಲ್ಲ. ಬುಡಕಟ್ಟು ಜನರ ಭಾಷೆಗಳಿರಲಿ ಸಾಕಷ್ಟು ಜನರು ಬಳಸುವ 'ಸಾಮಾಜಿಕ' ಭಾಷೆಗಳಾದ ತುಳು,ಕೊಡಗು,ಲಂಬಾಣಿ ಭಾಷೆಗಳ ಮೂಲಕ ಕೂಡ ಕಲಿಕೆಯು ನಡೆಯುತ್ತಿಲ್ಲ.

ಇಂತಹ ಪರಿಸ್ಥಿತಿಯನ್ನು ಮನಗಂಡವರು ಕಲಿಕೆಗೆ ಮೊದಲ ಭಾಷೆಯನ್ನು ಮಾಧ್ಯಮವಾಗಿ ಬಳಸಬೇಕು ಎನ್ನುವ ಬದಲು ಪ್ರಾದೇಶಿಕ ಭಾಷೆಯನ್ನು ಬಳಸಬೇಕು ಎಂಬ ವಾದವನ್ನು ಮಂಡಿಸುತ್ತಾರೆ. ಯುನೆಸ್ಕೋ ಕೂಡ ತನ್ನ ಐವತ್ತರ ದಶಕದ ಖ್ಯಾತ ದಾಖಲೆಯಲ್ಲಿ ಮಾತೃ ಭಾಷೆಯಲ್ಲಿ ಕಲಿಸಬೇಕು ಎಂದು ಹೇಳುವ ಬದಲು ವರ್ನಾಕ್ಯುಲರ್( ದೇಶೀಯ ಎಂದು ಹೇಳೋಣ) ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಬೇಕು ಎಂದು ಹೇಳಿದೆ. ವಸಾಹತು ಆಡಳಿತದಿಂದ ಬಿಡುಗಡೆ ಪಡೆದ ನೂರಾರು ರಾಷ್ಟ್ರಗಳ ಸಂದರ್ಭದಲ್ಲಿ ಯುನೆಸ್ಕೋದ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕು. ಇಂಗ್ಲಿಶ್, ಫ್ರೆಂಚ್,ಸ್ಪ್ಯಾನಿಶ್,ಡಚ್,ಪೋರ್‍ಚುಗೀಸ್ ಮುಂತಾದ ವಸಾಹತು ಭಾಷೆಗಳ ಜಾಗದಲ್ಲಿ ದೇಶಿಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಸಲಹೆ ನೀಡಿದ್ದು ಸರಿಯಾಗಿಯೇ ಇದೆ. ಈ ಕಾರಣದಿಂದಾಗಿಯೇ ಕಳೆದ ಶತಮಾನ ಆರು,ಏಳನೆಯ ದಶಕಗಳಲ್ಲಿ ದೇಶೀಯ ಭಾಷೆಗಳನ್ನು ಕಲಿಕೆಯ ಮಾಧ್ಯಮಗಳನ್ನಾಗಿ ಬಳಸಲು ಜಾಗತಿಕವಾಗಿ ಹೆಚ್ಚಿನ ಪ್ರಯತ್ನಗಳು ನಡೆದವು. ಕನ್ನಡದಲ್ಲೂ ಇಂತಹ ಯತ್ನಗಳು ನಡೆದವು.

ಚಾರಿತ್ರಿಕ ಸಂದರ್ಭವನ್ನು ಅವಲಂಬಿಸಿದ ಮೇಲಿನ ವಿಚಾರಗಳನ್ನು ಒಪ್ಪಿದರೆ ಮೊದಲ ಭಾಷೆಯಲ್ಲಿ ಕಲಿಕೆ ನಡೆಯ ಬೇಕೆನ್ನುವುದಕ್ಕೆ ಭಾವುಕವಾದ ಕಾರಣಗಗಳನ್ನು ಅಥವಾ ಶೈಕ್ಷಣಿಕ ತತ್ವಗಳನ್ನು ಅಧರಿಸಿದ ಕಾರಣಗಳನ್ನು ನೀಡುವ ವಾದವನ್ನು ಒಪ್ಪುವುದು ಸಾಧ್ಯವಾಗುವುದಿಲ್ಲ. ಆ ವಾದದ ತಿರುಳು ಸರಿಯೋ ತಪ್ಪೋ ಎನ್ನುವುದು ಮುಖ್ಯವಲ್ಲ, ವಾಸ್ತವವಾಗಿ ಹಾಗೆ ನಡೆಯುವುದು ಸಾಧ್ಯವೋ ಇಲ್ಲವೋ ಎನ್ನುವುದಷ್ಟೇ ನಮಗೆ ಮುಖ್ಯ.

ಶಿಕ್ಷಣವೆನ್ನುವುದು ಈಗ ವ್ಯಕ್ತಿಗತ ನೆಲೆಯ ವ್ಯಾಖ್ಯಾನಕ್ಕೆ ಒಳಗಾಗುವ ಪ್ರಕ್ರಿಯೆಯಾಗಿ ಉಳಿದಿಲ್ಲ. ಅದೀಗ ಸಾಮಾಜೀಕರಣದ ಒಂದು ಸಾಧನ. ಪಾರಂಪರಿಕ ಉತ್ಪಾದನಾ ವಿಧಾನಗಳನ್ನು ಬಿಟ್ಟುಕೊಟ್ಟ ಸಮಾಜ ಹೊಸಬಗೆಯ ದುಡಿಮೆಗಳಿಗಾಗಿ ತನ್ನ ಎಳೆಯ ತಲೆಮಾರನ್ನು ಕಟ್ಟುತ್ತಿರುತ್ತದೆ. ಹಾಗಾಗಿ ಕಲಿಕೆ ಎನ್ನುವುದು ಈ ಸಾಮಾಜಿಕ ಜವಾಬ್ದಾರಿಯ ನಿರ್ವಹಣೆಯಾಗಿದೆ. ಇಲ್ಲಿ ಕಲಿಕೆಯು ಯಾವ ಭಾಷೆಯಲ್ಲಿ ಆಗಬೇಕು ಎನ್ನುವುದನ್ನು ಚಾರಿತ್ರಿಕವಾದ ಮತ್ತು ಸಾಮಾಜಿಕವಾದ ಸಂಗತಿಗಳು ನಿರ್ದೇಶಿಸುತ್ತಿರುತ್ತವೆ. ಹೀಗಾದಾಗ ಕನ್ನಡದಂತಹ ಭಾಷೆಗಳಿಗೆ ಹಲವಾರು ಅಡ್ಡಿಆತಂಕಗಳು ಬರುವುದು ಸಹಜ. ನಾವು ಕನ್ನಡಪರ ಇಲ್ಲವೇ ಕನ್ನಡ ವಿರೋಧ ಎನ್ನುವ ನೆಲೆಯಲ್ಲಿ ಯೋಚಿಸುತ್ತ ಕೂರುವುದು ಈಗ ಸಾಧ್ಯವಿಲ್ಲ. ಸಾಮಾಜಿಕ ಆಶೋತ್ತರ ಮತ್ತು ಸಾಂಸ್ಕೃತಿಕ ಅಪೇಕ್ಷೆಗಳ ನಡುವೆ ಸಹಬಾಳ್ವೆ ಹೇಗೆ ನಡೆಯಬೇಕು ಎಂಬ ಕಡೆಗೆ ನಮ್ಮ ಚಿಂತನೆ ಮತ್ತು ಕಾರ್ಯಯೋಜನೆಗಳು ರೂಪಗೊಳ್ಳ ಬೇಕು. ಹೀಗಾಗಿ ಕನ್ನಡ ಇಲ್ಲವೇ ಇಂಗ್ಲಿಶ್ ಎನ್ನುವ ನಿಲುವಿಗಿಂತ ಕನ್ನಡ ಮತ್ತು ಇಂಗ್ಲಿಶ್ ಎಂದು ಗ್ರಹಿಸುವುದು ಹೆಚ್ಚು ಸೂಕ್ತ. ಹೀಗೆ ಗ್ರಹಿಸಿದಾಗ ಕನ್ನಡ ಯಾವಾಗಲೂ ದುರ್ಬಲವಾಗಿಯೇ ಇರುತ್ತದೆ ಎಂದು ತಿಳಿಯಬೇಕಾಗಿಲ್ಲ. ಬದಲಾವಣೆಯ ಮಿಡಿತಗಳಿಗೆ ಅನುಗುಣವಾಗಿ 'ನಮ್ಮ ಕನ್ನಡ'ವನ್ನು ಹೊಂದಿಸಿಕೊಂಡರೆ ಅದು ಸಾಕಷ್ಟು ಸಬಲವಾಗಿ ಮತ್ತು ತನ್ನ ಜಾಗವನ್ನು ಕಾಯ್ದುಕೊಳ್ಳಲು ಶಕ್ತವಾಗಬಲ್ಲುದು. ಹಾಗಿಲ್ಲದೆ ಕನ್ನಡದ ಚಲನಶೀಲತೆಯನ್ನು ನಿರಾಕರಿಸಿ ಭಾವುಕ ನೆಲೆಯಲ್ಲಿ 'ಕಾಯ್ದುಕೊಳ್ಳುವ' ಹಾದಿ ಹಿಡಿದರೆ ಅದರಿಂದ ಆಗುವ ಪ್ರಯೋಜನಗಳು ಕಡಿಮೆ.

ವಿರುದ್ಧ ಪದ, ನಿಷೇಧ ಪದ: ಹೀಗೆಂದರ್‍ಏನು?

ನಮ್ಮ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಕಲಿಸುವಾಗ ಕೆಲವು ಪದಗಳನ್ನು ನೀಡಿ ಅವುಗಳಿಗೆ 'ವಿರುದ್ಧಾರ್ಥ'ವನ್ನು ಬರೆಯಲು ಹೇಳುತ್ತಾರೆ. ಎಲ್ಲ ಪಾಠಗಳ ಕೊನೆಯಲ್ಲಿ ಬರುವ ಭಾಷಾಭ್ಯಾಸವೆಂಬ ಭಾಗದಲ್ಲಿ ಈ ವಿರುದ್ಧಾರ್ಥದ ಅಭ್ಯಾಸ ಸಾಮಾನ್ಯವಾಗಿ ಇದ್ದೇ ಇರುತ್ತದೆ. ತಂದೆ ತಾಯಂದಿರು ಕೆಲವೊಮ್ಮೆ ಮಕ್ಕಳ ಮನೆಗೆಲಸವನ್ನು ಮುಗಿಸುವ ಹೊಣೆ ಹೊತ್ತಾಗ ಹೀಗೆ ವಿರುದ್ಧಾರ್ಥಗಳನ್ನು ಮಕ್ಕಳಿಗೆ ಹೇಳಿಕೊಡ ಬೇಕಾದ ಪ್ರಸಂಗವನ್ನು ಎದುರಿಸುತ್ತಾರೆ. ಆಗ ಕನ್ನಡ'ಬಲ್ಲವರನ್ನು" ಹುಡುಕಿಕೊಂಡು ತಂದೆ ತಾಯಂದಿರು ಹೋಗುವುದುಂಟು. ಫೋನಿನಲ್ಲಿ ಕೇಳುವುದೂ ಉಂಟು. ಅಂತೂ ಎಲ್ಲರೂ ಈ ವಿದುದ್ಧ ಪದಗಳಿಗಾಗಿ ಹುಡುಕಾಟವನ್ನು ಮುಂದುವರೆಸುತ್ತಾರೆ. ಇದರಿಂದ ದೊರಕುವುದೇನು? ರಾತ್ರಿಗೆ ಹಗಲು, ಗಂಡನಿಗೆ ಹೆಂಡತಿ, ಬಿಳಿಗೆ ಕಪ್ಪು, ಎಡಕ್ಕೆ ಬಲ, ಆಕಾಶಕ್ಕೆ ಭೂಮಿ,ಬೆಂಕಿಗೆ ನೀರು, ಹಿಂದೂಗೆ ಮುಸ್ಲಿಂ,ಬಡವನಿಗೆ ಬಲ್ಲಿದ ಹೀಗೆ ಇನ್ನೂ ಹಲವು ಸೋಜಿಗದ ಪದ ಜೋಡಿಗಳು ನಿಮಗೆ ಸಿಗುತ್ತವೆ. ಕೆಲವೊಮ್ಮೆ ಒಂದೇ ಪದಕ್ಕೆ ಒಂದಕ್ಕಿಂತ ಹೆಚ್ಚು ವಿರುದ್ಧ ಪದಗಳು ತಾಮುಂದು ತಾಮುಂದು ಎಂದು ಪೈಪೋಟಿ ನಡೆಸುತ್ತವೆ.ಯಾವುದು ಸರಿಯಾದ ವಿರುದ್ಧ ಪದ ಎಂದು ತೀರ್ಮಾನಿಸುವುದು ಅಷ್ಟು ಸುಲಭವೇನಲ್ಲ. ಉದಾಹರಣೆಗೆ ಸಿಹಿಗೆ ಕಹಿ ವಿರುದ್ಧ ಪದವೆಂದು ತಿಳಿದರೆ ಏನಾಗುತ್ತದೆ? ಸಿಹಿಯಲ್ಲದುದು ಕಹಿಯಾಗಿ ಇರುತ್ತದೆ ಎಂದು ಹೇಳಬೇಕಾಗುತ್ತದೆ. ಆದರೆ ಸಿಹಿಯಲ್ಲದುದು ಕಹಿಯಾಗಿಯೇ ಇರಬೇಕಿಲ್ಲವಲ್ಲ. ಸಿಹಿಯಲ್ಲದ ಆದರೆ ಕಹಿಯೂ ಅಲ್ಲದ ಹಲವು ರುಚಿಗಳು ಇವೆಯಲ್ಲವೇ? ಅಂದರೆ ವಿರುದ್ಧ ಅರ್ಥವುಳ್ಳ ಪದಗಳು ಎಂಬ ಚಿಂತನೆಯೇ ಸರಿಯಾದುದಲ್ಲ.

ಈ ಗೊಂದಲ ಇಲ್ಲಿಗೇ ಮುಗಿಯುವುದಿಲ್ಲ. ಶಾಲಾ ಪುಸ್ತಕಗಳು ನಿಷೇಧ ಪದಗಳು ಎಂಬ ಇನ್ನೊಂದು ಗುಂಪನ್ನು ಮಾಡಿಕೊಳ್ಳುತ್ತವೆ. ನೀತಿ-ಅನೀತಿ, ಅರ್ಥ-ಅನರ್ಥ, ಆಚಾರ-ಅನಾಚರ,ಆಹಾರ-ನಿರಾಹಾರ,ನಿಶ್ಚಿತ-ಅನಿಶ್ಚಿತ, ಕಲ್ಮಶ-ನಿಷ್ಕಲ್ಮಶ, ತಂತು-ನಿಸ್ತಂತು ಹೀಗೆ ಪದಪಟ್ಟಿಯನ್ನು ಬೆಳೆಸಬಹುದು. ಇವೆಲ್ಲ ಪದ ಮತ್ತು ನಿಷೇಧ ಪದಗಳ ಜೋಡಿಗಳು. ಈ ಪಟ್ಟಿಯನ್ನು ಗಮನಿಸಿದರೆ ಇವೆಲ್ಲವೂ ಸಂಸ್ಕೃತದಿಂದ ಕನ್ನಡಕ್ಕೆ ಬಂದ ಪದಗಳು ಎಂಬುದು ತಿಳಿಯುತ್ತದೆ. ಅಲ್ಲದೆ ಜೋಡಿ ಪದಗಳಲ್ಲಿ ಮೊದಲ ಪದಕ್ಕೆ ಮೊದಲಲ್ಲಿ ಏನನ್ನೋ ಕೂಡಿಸುವುದರಿಂದ ನಿಷೇಧ ಪದವನ್ನು ಪಡೆದಿರುವುದೂ ತಿಳಿಯುತ್ತದೆ. ಅಂದರೆ ನಿಷೇಧ ಪದಗಳು ಪದರಚನೆಯ ನೆಲೆಯಲ್ಲಿ ರೂಪುಗೊಳ್ಳುತ್ತವೆ. ಅವುಗಳಲ್ಲಿ ಒಂದು ಮೂಲಪದವಾಗಿದ್ದು ಇನ್ನೊಂದನ್ನು ಗೊತ್ತುಪಡಿಸಿದ ನಿಯಮದ ಮೂಲಕ ನಾವು ರಚಿಸಿಕೊಳ್ಳುತ್ತೇವೆ. ಮೇಲೆ ನೀಡಿದ ಪದಜೋಡಿಗಳನ್ನು ಕೊಂಚ ಎಚ್ಚರಿಕೆಯಿಂದ ಗಮನಿಸಿದರೆ ಹೀಗೆ ನಿಷೇಧ ಪದಗಳನ್ನು ರಚಿಸುವಾಗ ಎರಡು ವಿಧಾನಗಳನ್ನು ನಾವು ಅನುಸರಿಸುವುದು ಗೊತ್ತಗುತ್ತದೆ. ಒಂದು ವಿಧಾನದಲ್ಲಿ ಮೂಲ ವಸ್ತು ಅಥವಾ ಗುಣ 'ಇಲ್ಲದಿರುವ' ಸ್ಥಿತಿಯನ್ನು ಸೂಚಿಸಲು ನಿಷೇಧ ರೂಪವನ್ನು ರಚಿಸುತ್ತೇವೆ. ಉದಾಹರಣೆಗೆ ಈ ಮುಂದಿನ ಪದಗಳ ಜೋಡಿಯನ್ನು ಗಮನಿಸಿ. ಚಿಂತೆ-ನಿಶ್ಚಿಂತೆ,ಫಲ-ನಿಷ್ಫಲ,ಜಲ-ನಿರ್ಜಲ,ಜನ-ನಿರ್ಜನ,ಚಲ-ನಿಶ್ಚಲ,ಶೇಷ-ನಿಶ್ಶೇಷ ಇತ್ಯಾದಿ. ಇವುಗಳಲ್ಲಿ ಮೊದಲ ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಇಲ್ಲದಿರುವುದನ್ನು' ಎರಡನೆಯ ಪದ ಸೂಚಿಸುತ್ತದೆ. ಇನ್ನೊಂದು ನಿಷೇಧ ರಚನೆಯ ಬಗೆಯಲ್ಲಿ ಒಂದು ಪದ ಸೂಚಿಸುವ ಗುಣ ಇಲ್ಲವೇ ಸ್ಥಿತಿಯು 'ಅಲ್ಲದಿರುವುದನ್ನು' ನಿಷೇಧ ಪದದ ಮೂಲಕ ಸೂಚಿಸುತ್ತೇವೆ. ಈ ಮುಂದಿನ ಪದಜೋಡಿಗಳನ್ನು ಗಮನಿಸಿ. ಹಿಂಸೆ-ಅಹಿಂಸೆ, ಹಿತ-ಅಹಿತ, ಕಾಲ-ಅಕಾಲ, ವೇಳೆ-ಅವೇಳೆ, ಉದಾರ-ಅನುದಾರ, ಧೈರ್ಯ-ಅಧೈರ್ಯ, ನೀತಿ-ಅನೀತಿ ಇತ್ಯಾದಿ. ಇಲ್ಲೆಲ್ಲಾ ಮೊದಲ ಪದದಲ್ಲಿ ಸೂಚಿತವಾಗುವುದನ್ನು ಎರಡನೆಯ ಪದ ಅಲ್ಲಗಳೆಯುತ್ತದೆ. ಕನ್ನಡದ 'ಇಲ್ಲ' ಮತ್ತು 'ಅಲ್ಲ' ಎಂಬ ಪದಗಳ ಕೆಲಸವನ್ನು ಮೇಲೆ ಹೇಳಿದ ನಿಷೇಧ ರೂಪಗಳು ಮಾಡುತ್ತಿವೆ.ಹಾಗೆ ನೋಡಿದರೆ ಹೀಗೆ ಪದರಚನೆಯ ಮೂಲಕ ನಿಷೇಧ ರೂಪಗಳನ್ನು ರಚಿಸುವ ವಿಧಾನ ಕನ್ನಡದಲ್ಲಿ ಇಲ್ಲ. ನಾವು ಈ ಪದ ಜೋಡಿಗಳನ್ನು ನೇರವಾಗಿ ಸಂಸ್ಕೃತದಿಂದ ಪಡೆದುಕೊಂಡಿದ್ದೇವೆ. ಕನ್ನಡದ್ದೇ ಆದ ನಿಷೇಧ ರೂಪರಚನೆಯ ನಿಯಮಗಳು ಇಲ್ಲ. ಸಂಸ್ಕೃತದ ಈ ಪದರಚನೆಯ ನಿಯಮವನ್ನು ಕನ್ನಡದ ಮಕ್ಕಳು ತಮ್ಮಶಾಲಾ ಶಿಕ್ಷಣದ ಹಂತದಲ್ಲಿ ಕಲಿಯಬೇಕೆ ಬೇಡವೇ ಎಂಬುದು ಬೇರೆಯೇ ಪ್ರಶ್ನೆ. ಅಂದರೆ ಈ ಪದಜೋಡಿಗಳಲ್ಲಿ ಒಂದೊಂದು ಪದವನ್ನು ಮಕ್ಕಳು ಸ್ವತಂತ್ರ ಪದಗಳಾಗಿಯೇ ಕಲಿಯುತ್ತಾರೆಯೇ ಹೊರತು. ಒಂದು ಮೂಲಪದವನ್ನು ಕಲಿತು ಅದಕ್ಕೆ ನಿಷೇಧ ಪ್ರತ್ಯಯವನ್ನು ಹತ್ತಿಸುವ ನಿಯಮವನ್ನು ಬಳಸುವುದಿಲ್ಲ. ಸದ್ಯ ನಾವಿಲ್ಲಿ ಈ ವಿವರಗಳನ್ನು ಕುರಿತು ಚರ್ಚಿಸುವುದು ಬೇಕಾಗಿಲ್ಲ.

ಆದರೆ ವಿರುದ್ಧ ಪದಗಳು ಹೀಗಲ್ಲ. ಒಂದು ಪದ ಸೂಚಿಸುವ ವಸ್ತು ಇಲ್ಲವೇ ಸ್ಥಿತಿ ವಿರುದ್ಧವಾದ ವಸ್ತು ಇಲ್ಲವೇ ಸ್ಥಿತಿ ನಮ್ಮ ಸುತ್ತಣ ಜಗತ್ತಿನಲ್ಲಿ ಇರುತ್ತದೆ ಎನ್ನುವ ಊಹೆಯ ಮೇಲೆ ಈ ವಿರುದ್ಧ ಪದಗಳ ನೆಲೆಗಟ್ಟು ನಿಂತಿದೆ. ಇದು ಪದರಚನೆಯ ನೆಲೆಗೆ ಸಂಬಂಧಿಸಿದ್ದಲ್ಲ. ಲೋಕ ಗ್ರಹಿಕೆಯ ನೆಲೆಗೆ ಸಂಬಂಧಿಸಿದೆ. ಅಂದರೆ ಲೋಕವನ್ನು ಅದರ ಬಿಡಿಬಿಡಿ ನೆಲೆಗಳನ್ನು ನಾವು ಗ್ರಹಿಸುವಾಗಲೇ ಪ್ರತಿಯೊಂದಕ್ಕೂ ಅದಕ್ಕೆ ವಿರುದ್ಧವಾದುದು ಇರುತ್ತದೆ ಎನ್ನುವ ನೆಲೆಯಲ್ಲೇ ಗ್ರಹಿಸುವಂತೆ ಮಾಡುವುದು ಎಷ್ಟು ಸರಿಯಾದುದುದು? ನಾವು ವಿರುದ್ಧ ಪದಗಳು ಎಂದು ಸಾಮಾನ್ಯವಾಗಿ ಶಾಲೆಯಲ್ಲಿ ಹೇಳಿಕೊಡುತ್ತಿರುವ ಪದಗಳಲ್ಲಿ ಕೆಲವನ್ನು ಆಯ್ದು ಈಗ ಈ ಬಗೆಯ ಗ್ರಹಿಕೆಯಲ್ಲಿ ಇರುವ ಎಡರುತೊಡರುಗಳೇನು ಎಂಬುದನ್ನು ತಿಳಿಯೋಣ. ಮಿತ್ರ ಎಂಬುದಕ್ಕೆ ಶತ್ರು ವಿರುದ್ಧ ಪದ ಎಂದು ಹೇಳಿದರೆ ಏನಾಗುತ್ತದೆ? ಇವೆರಡೂ ಸಾಪೇಕ್ಷ ಮತ್ತು ಸ್ವತಂತ್ರ ಸ್ಥಿತಿಗಳು. ನನಗೆ ಮಿತ್ರನಲ್ಲದ ವ್ಯಕ್ತಿ ನನಗೆ ಶತ್ರು ಆಗಿರಲೇ ಬೇಕಾಗಿಲ್ಲ. ಅಲ್ಲದೆ ಮಿತ್ರ ಮತ್ತು ಶತ್ರು ಎಂಬುದು ಯಾರು ಆ ಪದಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಅವಲಂಬಿಸಿ ಬದಲಾಗುತ್ತಲೇ ಹೋಗುತ್ತವೆ. ಮಿತ್ರ ಮತ್ತು ಶತ್ರು ಎಂಬ ಪದಗಳಿಂದ ಮಿತ್ರಪಕ್ಷ,ಶತ್ರುಪಕ್ಷ (ಅಥವಾ ಮಿತ್ರದೇಶ ಮತ್ತು ಶತ್ರುದೇಶ) ಎಂಬ ಪದಗಳನ್ನು ಪಡೆದುಕೊಂಡೆವು ಎಂದುಕೊಳ್ಳೋಣ. ಈ ಪದಗಳಿಗೆ ನಿರ್ದಿಷ್ಟವಾದ ಮತ್ತು ಕಾಲದೇಶ ಬದ್ಧವಲ್ಲದ ವ್ಯಾಖ್ಯಾನ ಇರುವುದು ಸಾಧ್ಯವೇ ಇಲ್ಲ. ಅಂದರೆ ಆ ಪದಗಳು ಹೇಗೆ ವಿರುದ್ಧ ಪದಗಳಾಗಬಲ್ಲವು? ಇದೇ ಬಗೆಯಲ್ಲಿ ವಿರುದ್ಧ ಪದಗಳ ಜೋಡಿಗಳನ್ನು ನಾವು ಬೇರೆಬೇರೆಯಾಗಿ ತೆಗೆದುಕೊಂಡು ನೋಡಬಹುದು. ಎಲ್ಲ ಕಡೆಗಳಲ್ಲೂ ಆ ಪದಗಳ ನಡುವೆ ವಿರುದ್ಧವಾದುದು ಏನೂ ಇರುವುದಿಲ್ಲ. ನಾವು ಆ ವಿರುದ್ಧ ಸ್ಥಿತಿಯನ್ನು ಆರೋಪಿಸುತ್ತೇವೆ. ಆ ಆರೋಪಿತ ಸ್ಥಿತಿಯನ್ನು ಮಕ್ಕಳಿಗೆ ಕಲಿಯ ಮೂಲಕ ರವಾನಿಸುತ್ತೇವೆ. ತನ್ನದು ತನ್ನದಲ್ಲದು ಅತ್ನವಾ ಸ್ವ ಮತ್ತು ಅನ್ಯ ಎಂಬ ಒಡೆದ ಸ್ಥಿತಿಯನ್ನು ಮೀರುವುದು ಎಲ್ಲ ಕಲಿಕೆಗಳ ಗುರಿಯಾಗ ಬೇಕಾಗಿರುವಾಗ ನಮಗೆ ಗೊತ್ತಿಲ್ಲದಂತೆ ಈ ನಿರಾಕರಣಗೊಳ್ಳಬೇಕಾದ ಮನೋಭಾವವೇ ನಮ್ಮ ಮಕ್ಕಳಲ್ಲಿ ಮೊಳಕೆಯೊಡುವಂತೆ ನಾವು ಮಾಡುತ್ತಿದ್ದೇವೆಯೇ?

ಇದೆಲ್ಲ ನಮ್ಮ ಕಲಿಕೆಯಲ್ಲಿ ಬೇರೂರಿದ್ದು ಹೇಗೆ? ವಸಾಹತು ಆಡಳಿತಕ್ಕೆ ಮಾದರಿಯಾಗಿದ್ದ ಪಬ್ಲಿಕ್ ಶಾಲೆಗಳ ಶಿಕ್ಷಣವು ಸಮಾನತಾ ಭಾವವನ್ನು ಬೆಳೆಸುವ ಗುರಿಯನ್ನು ಹೊಂದಿರಲಿಲ್ಲ.ತರತಮ ಭಾವವನ್ನೇ ಬೆಳೆಸಲು ಮುಂದಾಗಿದ್ದ ವಸಾಹತು ಮಾದರಿಯ ಕಲಿಕೆಯಲ್ಲಿ ಭಾಷಾ ಪಠ್ಯಕ್ರಮವು,ಮುಖ್ಯವಾಗಿ ಇಂಗ್ಲಿಶ್ ಭಾಷಾ ಕಲಿಕೆಯ ಪಠ್ಯ ಕ್ರಮವು ಸಿನಾನಿಮ್ ಮತ್ತು ಆಂಟಾನಿಮ್ ಗಳೆಂಬ ಪರಿಕಲ್ಪನೆಗಳನ್ನು ರೂಢಿಗೊಳಿಸಿತ್ತು. ನಾವು ಕಣ್ಣುಮುಚ್ಚಿ ಅದನ್ನೇ ನಮ್ಮ ಕಲಿಕೆಗೂ ನಕಲು ಮಾಡಿಕೊಂಡಿದ್ದರ ಪರಿಣಾಮವೇ ಇದು.ಕೊನೆಯ ಪಕ್ಷ ಉದ್ದೇಶದಲ್ಲಾದರೂ ಸಮಾನತಾ ಭವನ್ನು ಬೆಳೆಸುವ ಗುರಿ ನಮ್ಮ ಶಿಕ್ಷಣಕ್ಕೆ ಇದೆ.ಹಾಗಿದ್ದ ಮೇಲೆ ಇನ್ನಾದರೂ ಎಚ್ಚತ್ತು ಬದಲಾಗಬೇಕಲ್ಲವೇ?

ಊರಿಗೆಷ್ಟು ಹೆಸರು?

ನಾಡಿನ ತಿಳಿದ ಮಂದಿ ಊರುಗಳ ಹೆಸರು ಬದಲಾಯಿಸುವ ಉಮೇದನ್ನು ತೋರುತ್ತಿದ್ದಾರೆ.ಇದರಿಂದ ನಾಡಿನ ಜನರಿಗೆ ತಮ್ಮತನವನ್ನು ಕಾಯ್ದುಕೊಳ್ಳುವ ದಾರಿ ಸಿಗುತ್ತದೆ ಎನ್ನುತ್ತಿದ್ದಾರೆ. ಬೇರೆಯವರು ಬದಲಾಯಿಸಿದ ಹೆಸರನ್ನು ನಾವು ಮತ್ತೆ ಮೊದಲಿನಂತೆ ಮಾಡುವುದರಿಂದ ಕನ್ನಡದ ಚಹರೆಯನ್ನು ಕಾಯ್ದುಕೊಂಡಂತೆ ಆಗುವುದೆಂದು ಹೇಳುತ್ತಿದ್ದಾರೆ. ಹೀಗೆ ಹೆಸರು ಬದಲಾಯಿಸಬೇಕಾದ ಊರುಗಳ ಪಟ್ಟಿಯನ್ನು ಜನರು ತಮ್ಮಪಾಡಿಗೆ ತಾವು ತಯಾರಿಸುತ್ತಿದ್ದಾರೆ. ಈ ಹೊತ್ತಿನಲ್ಲಿ ಕೊಂಚ ಈ ಬಗ್ಗೆ ಬೇರೊಂದು ಕಡೆಯಿಂದ ನೋಡುವುದು ಆಗುವಂತಿದ್ದರೆ ಹಾಗೆ ಮಾಡಬೇಕಲ್ಲವೇ?

ನಾಡಿನ ಊರುಗಳಿಗೆ ಯಾರು ಹೆಸರನ್ನಿಟ್ಟರೋ ಯಾರಿಗೂ ಗೊತ್ತಿಲ್ಲ. ಆ ಊರಿನಲ್ಲಿ ನೆಲೆ ನಿಂತವರಿಗೂ ಗೊತ್ತಿರುವುದಿಲ್ಲ. ಆದರೆ ಎಲ್ಲ ಊರುಗಳ ಹೆಸರಿಗೂ ಒಂದೊಂದು ಕತೆ ಇರುತ್ತದೆ. ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು ಕತೆಗಳೂ ಇರುತ್ತವೆ. ಈ ಕತೆಗಳು ಹೆಸರಿಟ್ಟ ಮೇಲೆ ಹುಟ್ಟಿದವು. ಅದಕ್ಕಾಗಿ ಬೇರೆ ಬೇರೆ ಕತೆಗಳು ಒಂದೇ ಹೆಸರಿಗೆ ಅಂಟಿಕೊಂಡಿರುತ್ತವೆ. ಈ ಹೆಸರುಗಳು ಜನರ ಬಾಯಲ್ಲಿ ಬಳಕೆಯಾಗುವಾಗ ಬದಲಾಗುತ್ತಾ ಹೋಗುತ್ತವೆ. ನೂರಾರು ವರುಷಗಳು ಕಳೆದ ಹಾಗೆ ಹೆಸರುಗಳು ಮೊದಲಿನ ಹಾಗೆ ಇರದೇ ಗುರುತಿಸಲೂ ಆಗದ ಹಾಗೆ ಬದಲಾಗಿಬಿಟ್ಟಿರುತ್ತವೆ. ಜನರ ಬಾಯಲ್ಲಿ ಬದಲಾಗುವ ಹಾಗೆಯೇ ಆಗಾಗ ಬದಲಾಗುತ್ತಿದ್ದ ಅರಸರು ಊರುಗಳ ಹೆಸರನ್ನು ಬದಲಾಯಿಸುತ್ತಿದ್ದರು.ಇಂದಿನ 'ಚಾಮರಾಜ ನಗರ' ಹಿಂದೆ 'ಅರಿಕೊಠಾರ'ವಾಗಿತ್ತು. ಮೈಸೂರು ಅರಸರು ಅದನ್ನು ಬದಲಾಯಿಸಿದರು. ನಾಡಿನ ಕಲ್ಬರಹಗಳಲ್ಲಿ ಒಂದು ಊರಿನ ಹೆಸರಿನ ಜೊತೆಗೆ ಅದಕ್ಕಿರುವ ಇನ್ನೊಂದು ಹೆಸರನ್ನು 'ಪ್ರತಿನಾಮ' ಎಂದು ಗುರುತಿಸಿ ಹೇಳಿರುವುದುಂಟು. ಕೆಲವೊಮ್ಮೆ ಕನ್ನಡದ ಹೆಸರುಗಳನ್ನು ಸಂಸ್ಕೃತಕ್ಕೆ ಅನುವಾದಿಸಿರುವುದೂ ಇದೆ. 'ಅತ್ತಿಬೆಲೆ'ಯು "ಔದುಂಬರಪುರ'ವಾಗುತ್ತದೆ;'ನಂಜನಗೂಡು' 'ಗರಳಪುರಿ'ಯಾಗುತ್ತದೆ;'ಹಾಡುವಳ್ಳಿ' 'ಸಂಗೀತಪುರ'ವಾಗುತ್ತದೆ.ಇನ್ನೂ ಕೆಲವೊಮ್ಮೆ ಊರುಗಳ ಹೆಸರುಗಳು ಕಳೆದುಹೋಗುವುದೂ ಉಂಟು. ಈಗ ನಾವು ಬೆಂಗಳೂರು ಎಂದು ಕರೆಯುತ್ತಿರುವ ಊರಿನಲ್ಲಿ ಸರಿಸುಮಾರು ಐವತ್ತು ಊರ ಹೆಸರುಗಳು ಕಳೆದುಹೋಗಿವೆ. ಗವಿಪುರ,ಸಿದ್ಧಾಪುರ,ಗುಟ್ಟಹಳ್ಳಿ,ಮಾರತ್ ಹಳ್ಳಿ,ಜಕ್ಕಸಂದ್ರ, ಸಾರಕ್ಕಿ,ಶಿವನ ಹಳ್ಳಿ, ಸಾಣೇ ಗುರವನ ಹಳ್ಳಿ, ಹೆಣ್ಣೂರು, ಬಾಣಸವಾಡಿ, ಹಲಸೂರು,ನಾಗಸಂದ್ರ, ಗಂಗೇನ ಹಳ್ಳಿ ಹೀಗೆ ಪಟ್ಟಿ ಇದೆ. ಇವುಗಳಲ್ಲಿ ಕೆಲವು ಹೆಸರುಗಳು ಬಡಾವಣೆಗಳ ಹೆಸರುಗಳಾಗಿ ಉಳಿದಿವೆ. ಆದರೆ ಊರ ಹೆಸರುಗಳಾಗಿ ಅಲ್ಲ.

ಇದೇನೇ ಇರಲಿ. ಹೆಸರುಗಳನ್ನು ಬಾಯಲ್ಲಿ ಹೇಳುವುದೂ ಅವನ್ನು ಬರೆಯುವುದೂ ಬೇರೆಬೇರೆ. ನಮ್ಮ ಸಾವಿರಾರು ಊರುಗಳ ಹೆಸರನ್ನು ಬರೆಯ ಬೇಕಾಗಿ ಬಂದದ್ದೇ ಈಚಿನ ವರುಷಗಳಲ್ಲಿ. ಅದರಲ್ಲೂ ಆ ಯ್ ಊರಿನ ದಾಖಲೆಗಳನ್ನು ಜತನವಾಗಿ ಇರಿಸಲು ಸರಕಾರದ ಬೇರೆ ಬೇರೆ ಇಲಾಖೆಗಳು ಮುಂದಾಗಿರುವುದರಿಂದ ಹೀಗೆ ಹೆಸರನ್ನು ಬರೆಯಬೇಕಾಗಿ ಬಂದಿದೆ. ಹೀಗೆ ಬರೆಯುವಾಗ ಒಂದೇ ಬಗೆಯಲ್ಲಿ ಬರೆಯುತ್ತಿಲ್ಲ ಎನ್ನುವುದು ಹೆಚ್ಚು ಜನರಿಗೆ ಗೊತ್ತಿಲ್ಲ. ಅಂಚೆ ಇಲಾಖೆಯವರು ಒಂದು ಬಗೆಯಲ್ಲಿ ಬರೆದಿದ್ದರೆ,ಕಂದಾಯ ಇಲಾಖೆಯವರು ಮತ್ತೊಂದು ಬಗೆಯಲ್ಲಿ ಬರೆದಿರುತ್ತಾರೆ. ಪಂಚಾಯತ್ ರಾಜ್ಯ ಇಲಾಖೆಯವರು,ಪೋಲಿಸಿನವರು,ಮರಾಮತ್ ಇಲಾಖೆಯವರು,ಸಮಾಜ ಕಲ್ಯಾಣ ಇಲಾಖೆಯವರು ಹೀಗೆ ಹತ್ತು ಹಲವು ಕಡೆಗಳಲ್ಲಿ ಊರಿನ ಹೆಸರನ್ನು ಬರೆಯುವುದು ಈಗ ಬೇಕಾಗಿದೆ. ಒಮ್ಮೆ ಹೀಗೆ ಬರೆಯಲು ಮೊದಲು ಮಾಡಿದ ಮೇಲೆ ಊರಿನ ಹೆಸರುಗಳಿಗೆ ಎರಡು ರೂಪಗಳು ಉಳಿದುಕೊಳ್ಳುತ್ತವೆ. ಮಾತಿನ ರೂಪ ಮತ್ತು ಬರೆಹದ ರೂಪ. ಮಾತಿನ ರೂಪ ಮೊದಲಿನಂತೆ ಜನರ ನೆನಪನ್ನು ಹೊಂದಿಕೊಂಡು ಬದಲಾಗುವುದಿಲ್ಲ. ಬರೆದ ಬಗೆಯನ್ನು ಅನುಸರಿಸಿ ತನ್ನದೇ ಆದ ನೆಲೆಯೊಂದನ್ನು ಕಂಡುಕೊಳ್ಳುತ್ತದೆ. ಬರಹದ ರೂಪವಂತೂ ಈಗಿನ ದಾಖಲಾತಿ ಚೌಕಟ್ಟಿನಲ್ಲಿ ಹೆಚ್ಚು ಬದಲಾಗದೇ ಉಳಿಯಬಹುದಾಗಿದೆ.

ಜನರು ಊರಿನ ಹೆಸರನ್ನು ಬಾಯಲ್ಲಿ ಹೇಳುವಾಗ ಬದಲಾವಣೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆನಷ್ಟೆ. ಈ ಬದಲಾವಣೆ ಎರ್ರಾಬಿರ್ರಿಯಾಗಿರುವುದಿಲ್ಲ. ಊರಿನ ಹೆಸರಿನಲ್ಲಿ ಬಹುಮಟ್ತಿಗೆ ಎರಡು ಭಾಗ ಇರುತ್ತವೆ. ಎರಡನೆಯ ಭಾಗದಲ್ಲಿ 'ಊರು" ಎಂಬುದನ್ನು ಹೇಳುವಂತಿರುವ ಪದವಿರುತ್ತದೆ. ಊರು, ಪುರ, ನಗರ, ಕಲ್ಲು, ಗಾಲ, ಗಿ, ಹಾಳು, ಹಳ್ಳಿ, ವಾಡಿ, ಪಟ್ಟಣ, ಹಟ್ಟಿ, ಸಂದ್ರ, ಕೇರಿ, ಕೆರೆ, ಪೇಟೆ ಹೀಗೆ ಇಂತಹವು. ಮೊದಲ ಭಾದದಲ್ಲಿ ಚಿಕ್ಕ ಪದದಿಂದ ಹಿಡಿದು ಹಲವಾರು ಪದಗಳು ಇರುವುದೂ ಉಂಟು. ಜನರು ಈ ಎರಡು ಭಾಗಗಳನ್ನು ಚಿಕ್ಕದು ಮಾಡಿಕೊಳ್ಳುತ್ತಾರೆ. ಹೀಗೆ ಚಿಕ್ಕದು ಮಾಡಿಕೊಳ್ಳುವಾಗ ಮೊದಲ ಭಾಗದಲ್ಲಿ ಎರಡಕ್ಕಿಂತ ಹೆಚ್ಚು ಸ್ವರಗಳನ್ನು ಇರಿಸಿಕೊಳ್ಳುವುದಿಲ್ಲ.ಹಾಗೆಯೇ ಎರಡನೆಯ ಭಾಗದಲ್ಲಿ ಕೂಡ ಒಂದು ಅಥವಾ ಎರಡು ಸ್ವರಗಳನ್ನು ಮಾತ್ರ ಉಳಿಸಿಕೊಳ್ಳುತ್ತಾರೆ. ಇದೇಕೆ ಹೀಗೆ ಎಂದು ಯಾರಾದರೂ ಕೇಳಬಹುದು. ಅದಕ್ಕೆ ಕನ್ನಡ ನುಡಿಯ ಜಾಯಮಾನ ಎಂದಷ್ಟೇ ಹೇಳಬಹುದು. ಕೆಲವು ಊರುಗಳ ಹೆಸರು ಮಾತಿನಲ್ಲಿ ಏನಾಗುತ್ತದೆ ನೋಡಿ. ಕೃಷ್ಣರಾಜ ನಗರ ಕೆ.ಆರ್.ನಗರ, ತಿರುಮಕೂಡಲು ನರಸೀಪುರ, ಟಿ. ನರ್ಸಿಪುರ ಆಗುತ್ತವೆ.ಊರ ಹೆಸರಿನಲ್ಲಿ ಒಟ್ಟು ನಾಲ್ಕಕ್ಕಿಂತ ಹೆಚ್ಚು ಸ್ವರಗಳಿದ್ದರೆ ಆ ಸ್ವರಗಳನ್ನು ನಾಲ್ಕಕ್ಕೆ ಇಳಿಸಿಕೊಳ್ಳುವುದು ಕಂಡು ಬರುತ್ತದೆ.ಕೆಲವೊಮ್ಮೆ ಈ ಸಂಖ್ಯೆಯನ್ನು ಇನ್ನೂ ಕಡಿಮೆ ಮಾಡಿಕೊಳ್ಳುವುದೂ ಉಂಟು. ಇರುವಷ್ಟು ವ್ಯಂಜನಗಳನ್ನು ಮಾತ್ರ ಹಾಗೇ ಉಳಿಸಿಕೊಳ್ಳುತ್ತಾರೆ.'ಚಿಕ್ಕನಾಯಕನ ಹಳ್ಳಿ'ಯಲ್ಲಿ ಎಂಟು ಸ್ವರಗಳಿವೆ. ಜನರ ಬಾಯಲ್ಲಿ ಅದು 'ಚಿಕ್ ನಾಯ್ಕ್ ನಳ್ಳಿ' ಎಂದು ಆಗುವುದು.ಬದಲಿಗೆ ಕೆಲವೊಮ್ಮೆ 'ಸಿ.ಎನ್.ಹಳ್ಳಿ' ಆದರೂ ಅಲ್ಲಿ ನಾಲ್ಕು ಸ್ವರಕ್ಕೆ ಇಳಿಯುತದೆ.'ಹಾಸನ' 'ಹಾಸನ್' ಅಥವಾ 'ಹಾಸ್ನ' ಆಗುತ್ತದೆ. 'ಚಾಮರಾಜನಗರ' 'ಚಾಮ್ರಾಜ್ ನಗ್ರ' ಎಂದಾಗುತ್ತದೆ. ಹೀಗೇ ಪಟ್ಟಿ ಬೆಳೆಸಬಹುದು. ಈ ಮಾತು ಹೇಳಿದ್ದೇಕೆಂದರೆ, ಜನರಿಗೆ ಊರಿನ ಬರಹ ರೂಪ ಹೇಗಿದೆ ಎನ್ನುವುದು ಅದರ ಹೆಸರನ್ನು ಹೇಳುವಾಗ ಅಷ್ಟು ಗಮನಿಸಬೇಕಾದ ಸಂಗತಿಯಾಗಿ ತೋರುವುದಿಲ್ಲ ಎಂದು ತಿಳಿಸುವುದು.

ಇನ್ನೂ ಒಂದು ಮಾತಿದೆ. ಬಲ್ಲವರು ನಮ್ಮ ಊರುಗಳ ಹೆಸರುಗಳನ್ನು 'ಕುಲಗೆಡಿಸಿ'ದವರು ಇಂಗ್ಲಿಶಿನವರು ಎನ್ನುತ್ತಾರೆ. ಇಂಗ್ಲಿಶಿನವರು ನಮ್ಮ ಊರುಗಳ ಹೆಸರುಗಳನ್ನು ನಾವು ಬರೆದಂತೆ ಬರೆಯಲಿಲ್ಲ. ಏಕೆಂದರೆ ಎಷ್ಟೋ ಊರುಗಳ ಹೆಸರನ್ನು ನಾವು ಬಾಯಲ್ಲಿ ಹೇಳುತ್ತಿದ್ದುದನ್ನು ಅವರು ಕೇಳಿಸಿಕೊಂಡಂತೆ ಬರೆದರು. ಹೀಗಾಗಿ ಅವರು ಕೇಳಿಸಿಕೊಂಡದ್ದು ಹೇಗೋ ಹಾಗೆ ಊರ ಹೆಸರುಗಳು ಬರಹದಲ್ಲಿ ದಾಖಲಾದವು. ಆದರೆ ಸಾವಿರಾರು ಊರುಗಳ ಹೆಸರುಗಳನ್ನು ಮೊದಲು ಬರೆದವರು ನಾವೇ ಆಗಿದ್ದೇವೆ. ಅವುಗಳಿಗೆ ನಮ್ಮ ನುಡಿಯಲ್ಲಿ, ಜತೆಗೆ ಇಂಗ್ಲಿಶಿನಲ್ಲಿ ಬರೆಹ ರೂಪವನ್ನು ಕೊಟ್ಟವರು ನಾವೇ. ಹಾಗಾಗಿ ಏನಾದರೂ ಗೊಂದಲಗಳಿದ್ದರೆ ಅದಕ್ಕೆ ನಾವು ಹೊಣೆಗಾರರಾಗಿದ್ದೇವೆ. ಹಿಗೆ ಅಡ್ಡಾದಿಡ್ಡಿ ಹೆಸರುಗಳನ್ನು ಬರೆಯುವುದನ್ನು ಬದಲಾಯಿಸಿ ಒಂದು ಸರಿಯಾದ ಬಗೆಯಲ್ಲಿ ಬರೆಯುವುದು ಮತ್ತು ಅದೇ ರೂಪವನ್ನು ಎಂದೂ, ಎಲ್ಲೆಲ್ಲೂ ಬಳಸುವುದು ಈಗ ಆಗ ಬೇಕಾಗಿರುವ ಕೆಲಸ; ಹೆಸರುಗಳ ಹಳೆಯ ರೂಪಗಳಿಗೆ ಮರಳಿ ಹೋಗುವುದಕ್ಕಿಂತ ಇದು ಮೊದಲು ಆಗ ಬೇಕಾದ ಕೆಲಸ.

ಮತ್ತೆ ಕೆಲವರು ಇಂಗ್ಲಿಶಿನವರು ಕುಲಗೆಡಿಸಿದ ಹೆಸರುಗಳಿಗೆ ಕೊನೆಯಲ್ಲಿ 'ಉ' ಸೇರಿಸಿ ಬಿಟ್ಟರೆ ಅದು ಕನ್ನಡದ ಹೆಸರಾಗಿಬಿಡುವುದೆಂದು ಹೇಳುವುದುಂಟು. ಇದು ಸರಿಯಾದ ಮಾತಲ್ಲ. ಕನ್ನಡ ಮಾತಾಡುವ ಕೆಲವರು ಕೆಲವೊಮ್ಮೆ ಮತ್ತು ಕೆಲವು ಕಡೆಗಳಲ್ಲಿ ಹೀಗೆ ಕೊನೆಯಲ್ಲಿ 'ಉ' ಸೇರಿಸುವುದುಂಟು. ಕನ್ನಡ ಮಾತಾಡುವವರೆಲ್ಲ ಹೀಗೆ ಮಾಡುವುದಿಲ್ಲ. ತುಂಗಭದ್ರೆಯ ಉತ್ತರಕ್ಕೆ ಹೋದರೆ ಅಲ್ಲಿ ವ್ಯಂಜನದಿಂದ ಕೊನೆಯಾಗುವ ಪದಗಳನ್ನು ಬರೆಯುವಾಗ ಕೊನೆಗೆ 'ಅ' ಸೇರಿಸುತ್ತಾರೆ.ಆ ಕಡೆಯಿಂದ ಬರುವ ಎಷ್ಟೋ ಬಸ್ಸುಗಳಲ್ಲಿ 'ಬೆಂಗಳೂರ','ಮೈಸೂರ''ಮಂಗಳೂರ' ಎಂದು ಬರೆದಿರುವುದನ್ನು ನೋದಬಹುದು. ಆದರೆ ಅಲ್ಲಿ ಕನ್ನಡ ಮಾತನಾಡುವವರು ಈ ಊರುಗಳ ಹೆಸರನ್ನು ಹೇಳುವಾಗ ಕೊನೆಯಲ್ಲಿ 'ಅ' ಹೇಳುವುದಿಲ್ಲ. ಕೊನೆಯಲ್ಲಿ ವ್ಯಂಜನವನ್ನೇ ಹೇಳುತ್ತಾರೆ. ಅಲ್ಲದೆ ವ್ಯಂಜನದಿಂದ ಕೊನೆಯಾಗುವ ಎಲ್ಲ ಕಡೆಯಲ್ಲೂ "ಉ' ಸೇರಿಸಲು ಬರುವುದಿಲ್ಲ. 'ಹೊಸ್ ಪೇಟ್','ಬಾಗಲ್ ಕೋಟ್'.'ಕೋಲಾರ್','ರಾಮ್ ನಗರ್' ಮುಂತಾದವನ್ನು ಏನು ಮಾಡುವುದು. ಎಲ್ಲ ಕಡೆಗೂ ಉಕಾರವೇ ಸಲ್ಲುವುದೆಂದು ಹೇಳಬಹುದೇ?

ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗಿ ನೆಲೆಸುವುದು ಎಂದಿಗಿಂತಲೂ ಈಗ ಹೆಚ್ಚಾಗಿದೆ. ಬೇರೆಬೇರೆ ನುಡಿಗಳನ್ನಾಡುವವರು ಒಂದೆಡೆ ನೆಲಸುತ್ತಿದ್ದಾರೆ. ಇದರಿಂದ ಊರುಗಳ ಹೆಸರನ್ನು ಬರೆಯುವ ಬಗೆಯಲ್ಲಿ ಒಂದು ಚೌಕಟ್ಟನ್ನು ತರಬಹುದೇ ಹೊರತು ಆ ಹೆಸರುಗಳನ್ನು ಜನರು ಹೇಳುವ ಬಗೆಯಲ್ಲಿ ಅಲ್ಲ. ಹೀಗೆ ಹೆಸರನ್ನು ಹೇಳುವ ಬಗೆಯಲ್ಲೂ ನಾವು ಅಂದುಕೊಳ್ಳುವಂತೆ ಏರುಪೇರುಗಳು ಇರುವುದಿಲ್ಲ. ಬೇರೆ ಬಗೆಯಲ್ಲಿ ಹೆಸರನ್ನು ಹೇಳುತ್ತಿದ್ದರೂ ಅದರಲ್ಲೂ ಒಂದು ಚೌಕಟ್ಟು ಇರುತ್ತದೆ. ಮತ್ತು ಹಾಗೆ ಹೇಳುವುದಕ್ಕೆ ಜನರಿಗೆ ಅವರದ್ದೇ ಆದ ಕಾರಣಗಳಿರುತ್ತವೆ.

ಕೊನೆಗೊಂದು ಮಾತು: ಲೋಕದಲ್ಲಿ ಅತಿ ದೊಡ್ಡ ಹೆಸರಿರುವ ಊರು ಯಾವುದು? ಆ ಊರಿನ ಹೆಸರನ್ನು ರೋಮನ್(ಇಂಗ್ಲಿಶ್) ಲಿಪಿಯಲ್ಲಿ ಬರೆದರೆ ಅದರಲ್ಲಿ ೮೪ ಅಕ್ಷರಗಳಿರುತ್ತವೆ.

ಶಾಲೆಯಲ್ಲಿ ವ್ಯಾಕರಣ

ನಮ್ಮ ಶಾಲೆಗಳಲ್ಲಿ ಕನ್ನಡ ಕಲಿಕೆಗೆಂದು ಮೀಸಲಾದ ಯಾವುದೇ ಪಠ್ಯ ಪುಸ್ತಕವನ್ನು ತೆರೆದರೂ ಅದರ ಪಾಠಗಳ ಕೊನೆಯಲ್ಲಿ ವ್ಯಾಕರಣಾಂಶಗಳನ್ನು ಕುರಿತು ಮಾಹಿತಿ ಇರುತ್ತದೆ. ಕಲಿಸುವವರು ಮಕ್ಕಳಿಗೆ ಈ ವ್ಯಾಕರಣಾಂಶಗಳನ್ನು ಹೇಳಿಕೊಡುತ್ತಾರೆ. ಪರೀಕ್ಷೆಯಲ್ಲಿ ಮಕ್ಕಳ ವ್ಯಾಕರಣ ಕುರಿತ ತಿಳುವಳಿಕೆಯನ್ನು ಪ್ರಶ್ನೆಗಳನ್ನು ಕೇಳಿ ಮೌಲ್ಯಮಾಪನಮಾಡಲಾಗುತ್ತದೆ. ಕಲಿಕೆಯ ಈ ಕ್ರಮ ಎಷ್ಟು ಸರಿ ಎಂದು ನಾವೀಗ ಪ್ರಶ್ನಿಸಿಕೊಳ್ಳಬೇಕಾಗಿದೆ. ಇದಕ್ಕೆ ಮೂರು ಮುಖ್ಯ ಕಾರಣಗಳಿವೆ. ಒಂದು: ನಾವು ಶಾಲೆಗಳಲ್ಲಿ ಕಲಿಸುತ್ತಿರುವ ವ್ಯಾಕರಣ ನಿಜವಾಗಿ ಕನ್ನಡದ ಸ್ವರೂಪವನ್ನು ವಿವರಿಸುತ್ತಿಲ್ಲ. ಎರಡು: ಕನ್ನಡವನ್ನು ಮೊದಲ ಭಾಷೆಯನ್ನಾಗಿ ಹೊಂದಿರುವ ಮತ್ತು ಶಾಲೆಗೆ ಬರುವ ಮೊದಲೇ ಅನೌಪಚಾರಿಕವಾಗಿ ಕನ್ನಡ ಮಾತನಾಡಲು ಕಲಿತಿರುವ ಮಕ್ಕಳಿಗೆ ಈ ವ್ಯಾಕರಣದ ಕಲಿಕೆ ಆಗತ್ಯವಿಲ್ಲ. ನಮ್ಮ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯವರಿಗೆ ಕನ್ನಡ ಮೊದಲ ಭಾಷೆ. ಉಳಿದವರಲ್ಲಿ ಹಲವರಿಗೆ ಶಾಲೆಗೆ ಬರುವ ಮೊದಲೇ ಕನ್ನಡ ಆಡು ಭಾಷೆಯಾಗಿ ಗೊತ್ತಿರುತ್ತದೆ. ಹೀಗೆ ಕನ್ನಡವನ್ನು ಶಾಲೆಯಲ್ಲೆ ಮೊದಲ ಬಾರಿಗೆ ಕೇಳಿಸಿಕೊಳ್ಳುತ್ತಿರುವ ಮಕ್ಕಳೂ ಇದ್ದಾರಾದರೂ ಅವರ ಬಗ್ಗೆ,ಅವರಿಗೆ ಕನ್ನಡವನ್ನು ಕಲಿಸುವ ರೀತಿಯ ಬಗ್ಗೆ ನಾವು ಯಾವ ವಿಶೇಷ ಎಚ್ಚರವನ್ನೂ ವಹಿಸಿಲ್ಲ. ಹೆಚ್ಚಿನ ಪಾಲು ಉರ್ದು ಮಾಧ್ಯಮದ ಶಾಲೆಗಳಲ್ಲಿ ಈ ಸಮಸ್ಯೆ ಇರುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿಕೊಟ್ಟಿವೆ. ಅವರಿಗೂ ಈ ವ್ಯಾಕರಣ ಬೇಡದ ಹೊರೆಯಾಗಿದೆ. ಮೂರು: ಹೀಗೆ ಒತ್ತಾಯಪೂರ್ವಕವಾಗಿ ಕಲಿಸುವ ವ್ಯಾಕರಣ ಕೂಡ ಮುಂದೆ ಕನ್ನಡ ಬಳಸುವವರ ನೆರವಿಗೆ ಬರುವುದಿಲ್ಲ. ಅದು 'ಕಲಿತು ಮರೆಯುವ' ವಿಷಯವಾಗಿರುತ್ತದೆ.

ಮೊದಲ ಕಾರಣವನ್ನು ಗಮನಿಸೋಣ. ನಾವು ಈಗ ಕಲಿಸುತ್ತಿರುವ ಕನ್ನಡ ವ್ಯಾಕರಣ ನಿಜವಾಗಿ ಕನ್ನಡದ ಚಹರೆಗಳನ್ನು ವಿವರಿಸುವ ರೀತಿಯಲ್ಲಿ ಇಲ್ಲ.ನಾವು ಬಳಸುತ್ತಿರುವ ಕನ್ನಡದ ರಚನೆಯನ್ನು ವಿವರಿಸುವ ನಿಯಮಗಳನ್ನು ನಾವಿನ್ನೂ ಸರಿಯಾಗಿ ತಿಳಿದುಕೊಳ್ಳದಿರುವುದೇ ಇದಕ್ಕೆ ಕಾರಣವಾಗಿದೆ. ಹಳೆಗಾಲದ ಪಂಡಿತರು ಸಂಸ್ಕೃತ ವ್ಯಾಕರಣವನ್ನು ಅನುಸರಿಸಿ ರೂಪಿಸಿದ ನಿಯಮಗಳನ್ನೇ ಈಗಲೂ ನಾವು ಹೆಚ್ಚಾಗಿ ಬಳಸುತ್ತಿದ್ದೇವೆ. ಡಾ.ಡಿ.ಎನ್.ಶಂಕರಭಟ್ಟರು ಈ ಕೊರತೆಯನ್ನು ತೋರಿಸಿಕೊಟ್ಟಿದ್ದಾರೆ. ಅಲ್ಲದೆ ಈ ವ್ಯಾಕರಣವು ಬರೆಹದ ಕನ್ನಡವನ್ನು ಮಾತ್ರ ಗಮನದಲ್ಲಿ ಇರಿಸಿಕೊಳ್ಳುತ್ತದೆ. ಆಡುಗನ್ನಡವನ್ನು ಗಮನಿಸುವುದಿಲ್ಲ. ಆದ್ದರಿಂದ ಮಕ್ಕಳು ತಾವು ಆಡುವ ಕನ್ನಡ ವ್ಯಾಕರಣ ಬದ್ಧವಲ್ಲ ಎಂಬ ತಪ್ಪು ತಿಳುವಳಿಕೆಗೆ ಒಳಗಾಗುತ್ತಾರೆ. ಒಂದು ಚಿಕ್ಕ ನಿದರ್ಶನವನ್ನು ನೋಡಿ. ಸಪ್ತಮೀ ವಿಭಕ್ತಿಯ ಪ್ರತ್ಯಯಗಳೆಂದು 'ಒಳಗೆ' ಮತ್ತು 'ಅಲ್ಲಿ' ಎಂಬ ಎರಡು ರೂಪಗಳನ್ನು ಮಕ್ಕಳಿಗೆ ಪರಿಚಯಿಸಲಾಗುತ್ತದೆ.(ಇವು ಪ್ರತ್ಯಯಗಳೇ ಎಂಬುದು ಬೇರೆಯೇ ಪ್ರಶ್ನೆ. ಅದು ಒತ್ತಟ್ಟಿಗಿರಲಿ).ಮನೆಯೊಳಗೆ,ಮನೆಯಲ್ಲಿ, ಊರಿನೊಳಗೆ(ಊರೊಳಗೆ),ಊರಿನಲ್ಲಿ(ಊರಲ್ಲಿ) ಮುಂತಾದ ಪದರೂಪಗಳನ್ನು ಉದಾಹರಣೆಯಾಗಿ ಹೇಳಿಕೊಡಲಾಗುತ್ತದೆ. ಆದರೆ ಕನ್ನಡದ ಬಹುಪಾಲು ಮಕ್ಕಳು ಅದರಲ್ಲೂ ತುಂಗಭದ್ರೆಯ ಉತ್ತರದ ಭಾಗದವರು ತಾವು ಕಲಿತು ಆಡುವ ಕನ್ನಡ ಮಾತಿನಲ್ಲಿ ಈ ಪ್ರತ್ಯಯಗಳ ಬದಲು 'ಆಗ' ಎಂಬ ರೂಪವನ್ನೇ ಬಳಸುತ್ತಾರೆ. ಮನೆಯಾಗ,ಊರಾಗ,ತಲೆಯಾಗ ಇತ್ಯಾದಿ. ಆದರೆ ನಮ್ಮ ಶಾಲೆಯ ಪಠ್ಯಗಳಲ್ಲಿ ಇದರ ಸುಳಿವೇ ಇಲ್ಲ. ಅಂದರೆ ನಾವು ಯಾವ ಕನ್ನಡದ ರಚನೆಯನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದೇವೆ? ಇದು ಒಂದು ಚಿಕ್ಕ ಉದಾಹರಣೆ. ಇಂತವು ಹಲವಾರಿವೆ. ಅಂದರೆ ಕನ್ನಡದ ನಿಜವಾದ ಎಲ್ಲ ಲಕ್ಷಣಗಳನ್ನು ನಿರೂಪಿಸದ ವ್ಯಾಕರಣವನ್ನು ಮಕ್ಕಳಿಗೆ ನಾವು ಹೇಳಿಕೊಡುತ್ತಿದ್ದೇವೆ.

ಇನ್ನೊಂದು ಕಾರಣವನ್ನು ಈಗ ನೋಡೋಣ. ನಾವು ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡವನ್ನು ಹೇಳಿಕೊಡುವುದೇಕೆ? ಅವರಿಗಾಗಲೇ ಕನ್ನಡ ಗೊತ್ತಿರುತ್ತದೆ. ಅದರ ವ್ಯಾಕರಣ ನಿಯಮಗಳನ್ನು ಅವರು ಅಂತಸ್ಥ ಮಾಡಿಕೊಂಡಿರುತ್ತಾರೆ. ನಿಯಮಗಳೇನು ಎಂದು ವಿವರಿಸಲು ಆಗದಿದ್ದರೂ ಎಲ್ಲರೂ ವ್ಯಾಕರಣ ಬದ್ಧವಾಗಿಯೇ ಕನ್ನಡವನ್ನು ಬಳಸುತ್ತಿರುತ್ತಾರೆ. ಹಾಗಿದ್ದಲ್ಲಿ ನಾವು ನಿಯಮಗಳನ್ನು ಮತ್ತೊಮ್ಮೆ ಕಲಿಸಬೇಕೇಕೆ? ಹಾಗೆ ನೋಡಿದರೆ ನಮ್ಮ ಕನ್ನಡ ಬೋಧನೆಯ ಗುರಿ ಮುಖ್ಯವಾಗಿ ೧) ಮಕ್ಕಳ ಪದಕೋಶವನ್ನು ಹೆಚ್ಚಿಸುವ ಕಡೆಗೆ ಇರಬೇಕು ೨) ಆ ಪದಕೋಶದ ನೆರವಿನಿಂದ ಹೊಸ ಪದರಚನೆಯನ್ನು ಮಾಡಲು ಮಕ್ಕಳು ಶಕ್ತರಾಗುವಂತೆ ಮಾಡಬೇಕು ಮತ್ತು ೩) ಆವರು ಕನ್ನಡವನ್ನು ಹಲವು ಹೊಸ ಸನ್ನಿವೇಶಗಳಲ್ಲಿ ಬಳಸಲು ಸಾಧ್ಯವಾಗುವಂತೆ ತರಬೇತು ನೀಡಬೇಕು. ಹಾಗೆ ನೋಡಿದರೆ ಈ ಮೂರೂ ಗುರಿಗಳ ಸಾಧನೆಗೆ ವ್ಯಾಕರಣ ನಿಯಮಗಳನ್ನು ಕಲಿಸುವುದು ಅಗತ್ಯವೆಂದು ತೋರುವುದಿಲ್ಲ.

ವ್ಯಾಕರಣ ನಿಯಮಗಳನ್ನು ಶಾಲೆಗಳಲ್ಲಿ ಹೊಸದಾಗಿ ಕಲಿಯುವ ಮೂಲಕವೇ ಭಾಷೆಯ ಬಳಕೆಯು ಸಾಧ್ಯವಾಗುತ್ತದೆ ಎಂಬ ತಿಳುವಳಿಕೆಯು ನಮ್ಮಲ್ಲಿ ಬಲವಾಗಿ ಬೇರುಬಿಟ್ಟಿದೆ. ಸಾಮಾನ್ಯ ಕಲಿಕೆಯ ತತ್ವಗಳನ್ನು ನಾವು ಭಾಷೆಯ ನೆಲೆಗೂ ಅನ್ವಯಿಸುತ್ತೇವೆ. ಗಣಿತದಲ್ಲಿ ನಿಯಮಗಳನ್ನು ಕಲಿತ ಹಾಗೆ ಅಥವಾ ವಿಜ್ಞಾನ ವಿಷಯದಲ್ಲಿ ರಚನೆಗಳನ್ನು ತಿಳಿದ ಹಾಗೆ ಭಾಷೆಯ ಕಲಿಕೆಯಲ್ಲೂ ವ್ಯಾಕರಣ ಕಲಿಕೆ ಅಗತ್ಯವೆಂದು ಒಪ್ಪಿಬಿಟ್ಟಿದ್ದೇವೆ. ಆದರೆ ಈ ನಿಯಮಗಳು ಮಕ್ಕಳಿಗೆ ಮೊದಲೇ ತಿಳಿದಿರುತ್ತವೆ. ಹಾಗಿದ್ದಲ್ಲಿ ನಮ್ಮ ಶಾಲಾ ಶಿಕ್ಷಣದಲ್ಲಿ ವ್ಯಾಕರಣವನ್ನೂ ಏಕೆ ಅಳವಡಿಸಿಕೊಳ್ಳಲಾಯಿತು ಎಂಬ ಪ್ರಶ್ನೆ ಎದುರಾಗುತ್ತದೆ. ಇದು ಅನ್ಯ ಭಾಷೆಯೊಂದನ್ನು ಕಲಿಸುವ ಸಂದರ್ಭಕ್ಕೆ ಅನ್ವಯಿಸುವ ವಿಧಾನವಾಗಿದೆ. ಬ್ರಿಟಿಶರು ಇಂಗ್ಲಿಶನ್ನು ನಮಗೆ ಕಲಿಸಲು ಮೊದಲು ಮಾಡಿದಾಗ ಹೀಗೆ ಭಾಷೆಯ ವ್ಯಾಕರಣವನ್ನು ಹೇಳಿಕೊಡುವ ಮೂಲಕವೇ ಅದರ ಬಳಕೆಯನ್ನು ತಿಳಿದುಕೊಳ್ಳಲು ಸಾಧ್ಯವೆಂಬ ತತ್ವವನ್ನು ಶಿಕ್ಷಣದಲ್ಲಿ ಜಾರಿಗೊಳಿಸಿದರು. ಅದನ್ನು ನಾವು ಮಕ್ಕಳು ಈಗಾಗಲೇ ಅರಿತಿರುವ ಭಾಷೆಯ ವಿಷಯಕ್ಕೂ ಅನ್ವಯಿಸಿಕೊಂಡು ಬಿಟ್ಟಿದ್ದೇವೆ. ವಿಭಕ್ತಿ,ಕಾರಕ,ಆಖ್ಯಾತ,ಸಂಧಿ ಮುಂತಾದ ವ್ಯಾಕರಣ ಪ್ರಕ್ರಿಯೆಗಳನ್ನು,ಪರಿಕಲ್ಪನೆಗಳನ್ನು ನಾವು 'ಹೇಳಿಕೊಡುವ' ಅಗತ್ಯವಿಲ್ಲ. ಆದರೆ ಭಾಷೆಯನ್ನು ಹೊಸಹೊಸ ಸನ್ನಿವೇಶಗಳಲ್ಲಿ ಬಳಸಲು ಬೇಕಾದ ಉತ್ಪಾದಕತೆಯ ಸಾಮರ್ಥ್ಯವನ್ನು ಮಾತ್ರ ಮಕ್ಕಳಲ್ಲಿ ಬೆಳಸಬೇಕಾಗುತ್ತದೆ. ಹಾಗೆ ನೋಡಿದರೆ ನಮ್ಮ ಶಾಲೆಗಳಲ್ಲಿ ಈ ನೆಲೆಗೆ ದೊರಕುತ್ತಿರುವ ಒತ್ತು ತುಂಬಾ ಕಡಿಮೆಯಾಗಿದೆ. ಹಾಗಾಗಿ ನಮ್ಮ ಮಕ್ಕಳು ತಾವು ಬಲ್ಲ ಕನ್ನಡವನ್ನು ಜೀವನದ ಬೇರೆಬೇರೆ ಸಂದರ್ಭಗಳಲ್ಲಿ ಬಳಸಲು ಹಿಂಜರಿಯುವಂತಾಗಿದೆ. ಅವರು 'ಕಲಿತ' ವ್ಯಾಕರಣ ಅವರಿಗೆ ನೆರವಾಗುವುದಿಲ್ಲ. ಅಂದರೆ ಭಾಷೆಯ ರಚನೆಯನ್ನು 'ತಿಳಿಯುವುದು' ಒಂದು ನೆಲೆಯಾದರೆ ಅದರ ಬಳಕೆಯನ್ನು 'ಕಲಿಯುವುದು' ಇನ್ನೊಂದು ನೆಲೆ. ಮೊದಲನೆಯದನ್ನು 'ಕಲಿಯಬೇಕಾಗಿಲ್ಲ'. ಹಾಗೆ ಕಲಿಸಿದರೂ ಅದು ಅವರಿಗೆ ಬಳಕೆಯ ಸಾಮರ್ಥ್ಯಗಳನ್ನು ತಂದುಕೊಡುವುದಿಲ್ಲ. ಆದರೆ ಬಳಕೆಯ ಸಾಮರ್ಥ್ಯಗಳನ್ನು ಮಾತ್ರ ಹೊಸದಾಗಿಯೇ 'ಕಲಿತು' ಗಳಿಸಿಕೊಳ್ಳಬೇಕಾಗುತ್ತದೆ. ನಮ್ಮ ಶಾಲೆಗಳಲ್ಲಿ ಈ ಅಂಶದ ಕಡೆಗೆ ನಾವು ಗಮನವನ್ನು ನೀಡುತ್ತಿಲ್ಲ.

ಈಗ ಮೂರನೆಯ ಕಾರಣ ಉರಿತು ಕೆಲವು ಮಾತುಗಳನ್ನು ಹೇಳುವುದು ಅಗತ್ಯ. ನಮ್ಮ ಶಾಲಾ ಶಿಕ್ಷಣದ ಹಂತದಲ್ಲಿ ನಾವು ಕಲಿತ ವ್ಯಾಕರಣ ಮುಂದೆ ನಮ್ಮನ್ನು ಕೈಹಿಡಿದು ನಡೆಸುವುದಿಲ್ಲವೆಂಬುದಕ್ಕೆ ಹಲವಾರು ನಿದರ್ಶನಗಳಿವೆ. ಹೊಸ ಪದಗಳನ್ನು ರಚಿಸುವಾಗ ನಾವು ಕಲಿತ ಸಂಧಿಯ ನಿಯಮಗಳನ್ನು ನಾವು ಲೆಕ್ಕಕ್ಕೆ ಇರಿಸಿಕೊಳ್ಳುವುದೇ ಇಲ್ಲ. ದಿನದಿನವೂ ಪತ್ರಿಕೆಗಳಲ್ಲಿ ನಮಗೆ ಓದಲು ಸಿಗುವ ಮುಂದಿನ ಹಲವಾರು ರಚನೆಗಳನ್ನು ಗಮನಿಸಿ. ಹಸುರೋತ್ಸವ,ಚುಟುಕೋತ್ಸವ,ಕನ್ನಡೀಕರಣ,ನಗದೀಕರಣ,ಸಿದ್ಧರಾಮಯ್ಯಗೆ ಆಹ್ವಾನ,ದುರ್ನಡತೆ,ಸನ್ನಡತೆ,ಮಿಲಿಯಾಂತರ ಇತ್ಯಾದಿ. ಈ ರಚನೆಗಳನ್ನು ತಪ್ಪು ಎಂದು ಹೇಳಲು ನಾವೇನೋ ಸಿದ್ಧ. ಆದರೆ ಇಂತಹ ರಚನೆಗಳನ್ನು ಸಿದ್ಧಗೊಳಿಸಿ ಬಳಸುವವರಿಗೆ ಅವರು ಕಲಿತ ವ್ಯಾಕರಣ ಏಕೆ ನೆರವಾಗಲಿಲ್ಲ? ಅಥವಾ ಅವರು ವ್ಯಾಕರಣವನ್ನು ಸರಿಯಾಗಿ ಕಲಿಯದೇ ಇದ್ದುದರಿಂದ ಹೀಗಾಯಿತು ಎಂದು ವಾದಿಸಬೇಕೆ? ಹಾಗೇನೂ ಇಲ್ಲ. ಇಂತಹ ರಚನೆಗಳು ಏಕೆ ಸಿದ್ಧಗೊಳ್ಳುತ್ತವೆ ಎನ್ನುವುದನ್ನು ಕಂಡುಕೊಳ್ಳಲು ಸಾಧ್ಯವಾಗುವಂತೆ ನಮ್ಮ ಕನ್ನಡವನ್ನು ನಾವಿನ್ನೂ ವಿವರಿಸಿಕೊಂಡಿಲ್ಲ. ನಮ್ಮ ಶಾಲಾ ವ್ಯಾಕರಣ ನಿಯಮಗಳು ಭಾಷೆಯನ್ನು 'ಒಡೆಯುವಾಗ' ತೋರುವ ಚಹರೆಗಳನ್ನು ಹೇಳಲು ಯತ್ನಿಸುತ್ತವೆ. ಆದರೆ ಭಾಷೆಯನ್ನು 'ಕಟ್ಟುವಾಗ' ಏನಾಗುತ್ತದೆ ಎನ್ನುವುದನ್ನು ನಮ್ಮ ಮಕ್ಕಳಿಗೆ ಶಾಲೆಗಳಲ್ಲಿ ನಾವು ಹೇಳಿಕೊಡುತ್ತಿಲ್ಲ. ಅದರ ಪರಿಣಾಮಗಳನ್ನು ನಾವೀಗ ದಿನವೂ ನೋಡುತ್ತಿದ್ದೇವೆ.